Friday, September 27, 2024
Google search engine
Homeಅಪರಾಧದರ್ಶನ್ ಕೇಸ್ ಗೆ ಬಿಗ್ ಟ್ವಿಸ್ಟ್: ಶವ ಸಾಗಿಸಿದ್ದ ಚಾಲಕ ಚಿತ್ರದುರ್ಗ ಪೊಲೀಸರಿಗೆ ಶರಣು!

ದರ್ಶನ್ ಕೇಸ್ ಗೆ ಬಿಗ್ ಟ್ವಿಸ್ಟ್: ಶವ ಸಾಗಿಸಿದ್ದ ಚಾಲಕ ಚಿತ್ರದುರ್ಗ ಪೊಲೀಸರಿಗೆ ಶರಣು!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶವವನ್ನು ಸಾಗಿಸಿದ ಚಾಲಕ ರವಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೂಲಕ ಕನ್ನಡದ ಖ್ಯಾತ ನಟ ದರ್ಶನ್ ಗ್ಯಾಂಗ್ ಮಾಡಿದ್ದಾರೆ ಎನ್ನಲಾದ ಕೊಲೆ ಪ್ರಕರಣದಲ್ಲಿ ಪ್ರಮುಖ ತಿರುವು ಲಭಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಪ್ತೆ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಶವವನ್ನು ಸಾಗಿಸಿದ್ದ ಚಾಲಕ ರವಿ ಚಿತ್ರದುರ್ಗದಲ್ಲಿ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಮುಂದೆ ಶುಕ್ರವಾರ ಶರಣಾಗಿದ್ದಾನೆ.

ಶವವನ್ನು ಬಿಸಾಡಿದ ನಂತರ ರವಿ ತಲೆಮರೆಸಿಕೊಂಡಿದ್ದ. ನಂತರ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಮುಖಂಡರನ್ನು ಸಂಪರ್ಕಿಸಿದ್ದು, ಇವರು ಪೊಲೀಸರಿಗೆ ಶರಣಾಗುವಂತೆ ಮನವೊಲಿಸಿದ್ದಾರೆ.

ರವಿಯನ್ನು ಸಂಪರ್ಕಿಸಿದ್ದ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದರು. ನಂತರ ಆತನನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ್ದರು. ಕೊಲೆಯಾದ ನಂತರ ಶವವನ್ನು ಬಿಸಾಡಲು ರವಿ ನೆರವನ್ನು ಪಡೆಯಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments