ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮೇಲೆ ಆರೋಪಿ ಶೂ ಎಸೆದ ಪ್ರಕರಣ ಸೋಮವಾರ ನಡೆದಿದೆ.
ವೃದ್ಧ ಆರೋಪಿ ಮುಖ್ಯ ನ್ಯಾಯಮೂರ್ತಿ ಮೇಲೆ ಎಸೆದ ಚಪ್ಪಲಿ ನ್ಯಾಯಾಲಯದ ಬೆಂಚ್ ಮುಂದೆ ಬಿದ್ದಿದೆ. ಶೂ ಗವಾಯಿ ಅವರ ಸಮೀಪವೂ ತಲುಪಲಿಲ್ಲ. ದಾಳಿ ನಡೆಸಿದ ವ್ಯಕ್ತಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಆಘಾತಕಾರಿ ಘಟನೆ ನಡುವೆಯೂ ವಿಚಲಿತರಾಗದ ಮುಖ್ಯ ನ್ಯಾಯಮೂರ್ತಿ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾರಿಗಾದರೂ ಅದರ ಮೇಲೆ ಪರಿಣಾಮ ಬೀರುತ್ತದೆ ಅಂದರೆ ಎಲ್ಲರಿಗಿಂತ ಕಡೆಯ ವ್ಯಕ್ತಿ ನಾನಾಗಿರುತ್ತೆನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆಘಾತಕಾರಿ ಘಟನೆ ನಡುವೆಯೂ ವಿಚಲಿತರಾಗದ ಮುಖ್ಯ ನ್ಯಾಯಮೂರ್ತಿ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾರಿಗಾದರೂ ಅದರ ಮೇಲೆ ಪರಿಣಾಮ ಬೀರುತ್ತದೆ ಅಂದರೆ ಎಲ್ಲರಿಗಿಂತ ಕಡೆಯ ವ್ಯಕ್ತಿ ನಾನಾಗಿರುತ್ತೆನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ವಿಚಾರಣೆ ಆರಂಭವಾದಾಗ ಮೊದಲ ಪ್ರಕರಣ ಕೈಗೆತ್ತಿಕೊಂಡಾದ ವೃದ್ಧ ಸನಾತನ ಧರ್ಮದ ಅಪಮಾನ ಸಹಿಸಲ್ಲ ಎಂದು ಘೋಷಣೆ ಕೂಗಿದ್ದಾನೆ. ಕೂಡಲೇ ಶೂವನ್ನು ನ್ಯಾಯಮೂರ್ತಿಗಳತ್ತ ಎಸೆದಿದ್ದಾನೆ.
ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ವೃದ್ಧನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವೃದ್ಧ ನಕಲಿ ಗುರುತು ಚೀಟಿ ಪಡೆದು ಕೋರ್ಟ್ ಪ್ರವೇಶಿಸಿದ್ದಾನೆ ಎಂದು ಹೇಳಲಾಗಿದ್ದು, ನಕಲಿ ಗುರುತು ಚೀಟಿ ಪ್ರಕಾರ ಆತನ ಹೆಸರು ಕಿಶೋರ್ ರಾಕೇಶ್ ಎಂದು ತಿಳಿದು ಬಂದಿದೆ.
ವೃದ್ಧ ಯಾವ ಉದ್ದೇಶದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಾನೆ ಎಂದು ತಿಳಿದು ಬಂದಿಲ್ಲ. ಆದರೆ ಘಟನೆಯಿಂದ ವಿಚಲಿತರಾದ ಗವಾಯಿ ವಿಚಾರಣೆ ಮುಂದುವರಿಸಿದ್ದಾರೆ.
ಘಟನೆ ಬಗ್ಗೆ ವಕೀಲ ಸಮುದಾಯದ ಆಘಾತ ವ್ಯಕ್ತಪಡಿಸಿದ್ದು, ಇದು ಜಾತಿವಾದಿಗಳಿಂದ ನ್ಯಾಯಾಲಯಕ್ಕೆ ಹಾಗೂ ದೇಶದ ಕಾನೂನಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


