Thursday, September 19, 2024
Google search engine
Homeತಾಜಾ ಸುದ್ದಿದೀಪಾವಳಿಗೂ ಮುನ್ನವೇ ಸರ್ಕಾರ ಪತನ: ಸಿಟಿ ರವಿ ಬಾಂಬ್

ದೀಪಾವಳಿಗೂ ಮುನ್ನವೇ ಸರ್ಕಾರ ಪತನ: ಸಿಟಿ ರವಿ ಬಾಂಬ್

ಸಂಕ್ರಾಂತಿ ತುಂಬಾ ದೂರ ಇದೆ. ದೀಪಾವಳಿಗೂ ಮುನ್ನವೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಸರ್ಕಾರ ಬೀಳೋದಂತೂ ಗ್ಯಾರಂಟಿ ಎಂದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸಿದ್ದಾರಾಮಯ್ಯ ದೀಪಾವಳಿಗೂ ಮುನ್ನವೇ ರಾಜೀನಾಮೆ ನೀಡಲಿದ್ದಾರೆ. ನಂತರ ಸರ್ಕಾರ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ ಎಂದು ಅವರು ಹೇಳಿದರು.

ಭ್ರಷ್ಟರು ಅಧಿಕಾರದಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ರಾಜ್ಯಪಾಲರು ಪ್ರಾಸಿಕ್ಯೂಷನ್ವಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿ ಕುರಿತು ಹೈಕೋರ್ಟ್ ತೀರ್ಪಿನ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments