Tuesday, October 22, 2024
Google search engine
Homeತಾಜಾ ಸುದ್ದಿಲಾರೆನ್ಸ್ ಬಿಶ್ನೋಯಿ ಎನ್ ಕೌಂಟರ್ ಗೆ 1,11,11,111 ರೂ. ನಗದು ಬಹುಮಾನ ಘೋಷಿಸಿದ ಕರ್ಣಿಸೇನಾ!

ಲಾರೆನ್ಸ್ ಬಿಶ್ನೋಯಿ ಎನ್ ಕೌಂಟರ್ ಗೆ 1,11,11,111 ರೂ. ನಗದು ಬಹುಮಾನ ಘೋಷಿಸಿದ ಕರ್ಣಿಸೇನಾ!

ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಅವರನ್ನು ಎನ್ ಕೌಂಟರ್ ಮಾಡಿದರೆ ಅಥವಾ ಜೈಲಿಗೆ ಹಾಕಿದರೆ 1,11,11,111 ರೂ. ನಗದು ಬಹುಮಾನ ನೀಡುವುದಾಗಿ ಕ್ಷತ್ರೀಯ ಕರ್ಣಿ ಸೇನಾ ಘೋಷಿಸಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ರಜಪೂತ್ ನ ಪ್ರಮುಖ ಮುಖಂಡ ಸುಖದೇವ್ ಸಿಂಗ್ ಗೋಗಾಮೇಡಿ ಹತ್ಯೆಗೆ ಪ್ರತೀಕಾರವಾಗಿ ಲಾರೆನ್ಸ್ ಬಿಶ್ನೋಯಿ ಹತ್ಯೆಗೆ ಕರ್ಣೀ ಸೇನಾ ಮುಖ್ಯಸ್ಥ ರಾಜ್ ಶೇಖಾವತ್ ಬಹುಮಾನ ಘೋಷಿಸಿದ್ದಾರೆ.

ಡ್ರಗ್ಸ್ ಸ್ಮಗ್ಲಿಂಗ್ ಆರೋಪದಲ್ಲಿ ಬಂಧಿತನಾಗಿರುವ ಲಾರೆನ್ಸ್ ಬಿಶ್ನೋಯಿ ಪ್ರಸ್ತುತ ಗುಜರಾತ್ ನ ಸಬರ್ಮತಿ ಜೈಲಿನಲ್ಲಿದ್ದಾನೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಿದ ಲಾರೆನ್ಸ್ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಯ ಬೆದರಿಕೆ ಒಡ್ಡಿದ್ದಾನೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಜೈಪುರದಲ್ಲಿ ಚಹಾ ಸೇವಿಸುತ್ತಿದ್ದಾಗ ಸುಖದೇವ್ ಸಿಂಗ್ ಗೋಗಾಮೇಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗುಂಡಿನ ದಾಳಿಯಲ್ಲಿ ಸೆಕ್ಯೂರೆಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಕೊಲ್ಲಲಾಗಿತ್ತು. ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಈ ಕೊಲೆಯ ಹೊಣೆ ಹೊತ್ತುಕೊಂಡಿತ್ತು.

ರಾಜ್ ಶೇಖಾವತ್ ಬಹುಮಾನ ಮೊತ್ತ ಘೋಷಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಮ್ಮ ಸಮುದಾಯದ ಅದ್ಭುತ ವ್ಯಕ್ತಿಯಾದ ಸುಖದೇವ್ ಅವರನ್ನು ಹತ್ಯೆ ಮಾಡಿದ ಲಾರೆನ್ಸ್ ಬಿಶ್ನೋಯಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments