Friday, September 20, 2024
Google search engine
Homeತಾಜಾ ಸುದ್ದಿಛತ್ತೀಸಗಢದಲ್ಲಿ ನಕಲ್ಸ್ ಮುಖಂಡ ಸೇರಿ 29 ಜನರ ಎನ್ ಕೌಂಟರ್

ಛತ್ತೀಸಗಢದಲ್ಲಿ ನಕಲ್ಸ್ ಮುಖಂಡ ಸೇರಿ 29 ಜನರ ಎನ್ ಕೌಂಟರ್

ಭದ್ರತಾಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲರ ನಾಯಕ ಸೇರಿದಂತೆ 29 ಮಂದಿಯನ್ನು ಹತ್ಯೆ ಮಾಡಿದ ಘಟನೆ ಛತ್ತೀಸಗಢದಲ್ಲಿ ನಡೆದಿದೆ.

ಕಾಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್ ಕೌಂಟರ್ ನಲ್ಲಿ ನಕ್ಸಲ್ ಮುಖಂಡ ಶಂಕರ್ ರಾವ್ ಸೇರಿದಂತೆ 29 ಮಂದಿಯನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

ನವೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ನಕ್ಸಲರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಲೋಕಸಭಾ ಚುನಾವಣೆಗೂ ಮುನ್ನ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ನಕ್ಸಲರ ಗುಂಪನ್ನು ಬೇಟೆಯಾಡಿದೆ.

ಮೃತಪಟ್ಟ ನಕ್ಸಲರ ಗುಂಪಿನ ಬಳಿ ಎಕೆ-47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಶಂಕರ್ ರಾವ್ ತಲೆಗೆ ಪೊಲೀಸರು 25 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments