Thursday, September 19, 2024
Google search engine
Homeತಾಜಾ ಸುದ್ದಿಮೋದಿಗಾಗಿ ದೇವಸ್ಥಾನ ಕಟ್ಟಿಸಬೇಕು: ಮಮತಾ ಬ್ಯಾನರ್ಜಿ ಅಚ್ಚರಿ ಹೇಳಿಕೆ

ಮೋದಿಗಾಗಿ ದೇವಸ್ಥಾನ ಕಟ್ಟಿಸಬೇಕು: ಮಮತಾ ಬ್ಯಾನರ್ಜಿ ಅಚ್ಚರಿ ಹೇಳಿಕೆ

ಮೋದಿಗಾಗಿ ದೇವಸ್ಥಾನ ಕಟ್ಟಿಸಬೇಕು. ಏಕೆಂದರೆ ದೇವಸ್ಥಾನದಲ್ಲಿ ಮೂರ್ತಿ ಬಾಯಿ ಮುಚ್ಚಿಕೊಂಡು ಕೂತಿರಬೇಕು. ಜನರಿಗೆ ತೊಂದರೆ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ದೇವರೇ ನನ್ನನ್ನು ಕಳಿಸಿದ್ದಾರೆ. ನಾನೇ ದೇವರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕೋಲ್ಕತಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ದೇವರು ರಾಜಕೀಯ ಮಾಡಬಾರದು ಮತ್ತು ಗಲಭೆಗಳನ್ನು ಸೃಷ್ಟಿಸಿ ತಾರತಮ್ಯ ಮಾಡಬಾರದು ಎಂದು ತಿವಿದರು.

ಮೋದಿ ತನ್ನನ್ನು ತಾನು ದೇವರು ಎಂದು ಭಾವಿಸಿಕೊಂಡಿದ್ದಾರೆ. ಅವರಿಗೆ ಖಂಡಿತ ದೇವಸ್ಥಾನ ನಿರ್ಮಿಸಬೇಕು. ಏಕೆಂದರೆ ಅಲ್ಲಿ ಕೂತರೆ ದೇಶದ ಜನರಿಗೆ ತೊಂದರೆ ಕೊಡುವುದು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಒಬ್ಬ ಹೇಳುತ್ತಾನೆ ಮೋದಿ ದೇವರುಗಳ ದೇವರು ಅಂತ. ಮತ್ತೊಬ್ಬ ಹೇಳುತ್ತಾನೆ ಮೋದಿ ಜಗನ್ನಾಥ ಕಳಿಸಿದ ಭಕ್ತ ಅಂತ. ಒಂದು ವೇಳೆ ಅವರು ಹೇಳಿದಂತೆ ಮೋದಿ ದೇವರೇ ಆಗಿದ್ದರೆ ಮೋದಿ ರಾಜಕೀಯ ಮಾಡಬಾರದಿತ್ತು. ಗಲಭೆಗಳಲ್ಲಿ ಹಸ್ತಕ್ಷೇಪ ಮಾಡಬಾರದಿತ್ತು. ಪೂಜೆ ಮಾಡಿಸಿಕೊಳ್ಳಲು ಭಕ್ತರಿಗಾಗಿ ದೇವಸ್ಥಾನ ಕಟ್ಟಿಸೋಣ ಎಂದು ಅವರು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments