Thursday, December 25, 2025
Google search engine
Homeಜ್ಯೋತಿಷ್ಯನವರಾತ್ರಿ ಎನ್ನುವ ಆಯುರ್ವೇದ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

ನವರಾತ್ರಿ ಎನ್ನುವ ಆಯುರ್ವೇದ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

ನವರಾತ್ರಿಯು ನವದುರ್ಗೆಯರೊಂದಿಗೆ ಆಯುರ್ವೇದದ ಔಷಧಿಯ ಸೇವನೆಯ ಪರ್ವವೂ ಹೌದು. ನಮ್ಮ ಋಷಿ ಮುನಿಗಳು ಈ ಋತು(ಕಾಲ)ವಿನಲ್ಲಿ ಸೇವಿಸಬೇಕಾದ ಕೆಲವು ಔಷಧಿಗಳನ್ನು ಉಲ್ಲೇಖಿಸಿದ್ದಾರೆ. ಇವುಗಳನ್ನು ಪ್ರತ್ಯೇಕ ದಿನಗಳಲ್ಲಿ ಸೇವಿಸುವುದರಿಂದ ನಮ್ಮ ಶಾರೀರಕ, ಮಾನಸಿಕ ಕ್ಷಮತೆಯು ಹೆಚ್ಚಾಗಿ ನಾವು ನಮ್ಮ ಶಕ್ತಿ-ತೇಜಸ್ಸು-ಬಲ-ಬುದ್ಧಿಗಳನ್ನು ಸದೃಢಗೊಳಿಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ,ನಿರೋಗಿಗಳನ್ನಾಗಿಸಿ ದೀರ್ಘಕಾಲ ಸ್ವಸ್ಥ ಜೀವನ ನಡೆಸಲು ನೆರವಾಗುವ ಒಂಬತ್ತು ತರದ ಈ ದಿವ್ಯ ಮಹೌಷಧಿಗಳು ನಿಸ್ಸಂದೇಹವಾಗಿ ಪ್ರಭಾವಶಾಲಿಗಳಾಗಿವೆ.ಔಷಧ ರೂಪದಲ್ಲಿರುವ ನವದುರ್ಗೆಗಳ ಸೇವನೆಯನ್ನು ಇನ್ನು ಬರುವ ಚಳಿಗಾಲಕ್ಕೆ ಮುನ್ನುಡಿಯೆಂಬಂತೆ ಸ್ವೀಕರಿಸಬಹುದು. ಈ ಔಷಧಗಳು

  1. ಹರಿದ್ರಾ 2 ಬ್ರಾಹ್ಮೀ 3 ಚಂದಸೂರ 4. ಕೂಷ್ಮಾಂಡ 5. ಅಲಸೀ 6. ಮಾಚಿಕಾ 7. ನಾಗದಾನ 8. ತುಲಸೀ 9. ಶತಾವರೀ
  2. ಪ್ರಥಮ-ಶೈಲಪುತ್ರೀ ಯಾ ಹರಿದ್ರಾ:ಅನೇಕ ಪ್ರಕಾರಗಳ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರುವ ಮದ್ದಿನ ಗಣಿ.ಆಯುರ್ವೇದದ ಪ್ರಧಾನ ಔಷಧ. ಇದರಲ್ಲಿ ಏಳು ವಿಧಗಳಿವೆ.
    ದ್ವಿತೀಯ- ಬ್ರಹ್ಮಚಾರಿಣೀ ಯಾ ಬ್ರಾಹ್ಮೀ(ಸರಸ್ವತೀ):ಇದು ಆಯುಸ್ಸು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದು. ರಕ್ತವಿಕಾರಗಳನ್ನು ನಾಶ ಮಾಡುತ್ತದೆ. ಸ್ವರಶುದ್ಧಿಗೆ ದಿವ್ಯೌಷಧ. ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ವಾಯು,ಮೂತ್ರಸಂಬಂಧದ ರೋಗಗಳಿಗೆ ಮುಖ್ಯೌಷಧ.
  3. ಚಂದ್ರಘಂಟಾ ಯಾ ಚಂದ್ರಸೂರ: ಇದನ್ನು ಚಮಸೂರ ಎಂದೂ ಕರೆಯುತ್ತಾರೆ.ಇದು ಕೊತ್ತಂಬರಿಯ ರೀತಿಯಲ್ಲಿರುವ ಗಿಡ.ಇದರ ಎಲೆಗಳನ್ನು ಬಳಸಿ ಪಲ್ಯಗಳನ್ನು ಮಾಡುತ್ತಾರೆ.
    ಸ್ಥೂಲಕಾಯವನ್ನು ಕರಗಿಸಲು ಸಹಕಾರಿ.ಇದರಿಂದ ಇದಕ್ಕೆ ಚರ್ಮಹಂತೀ ಎಂಬ ಹೆಸರೂ ಇದೆ.ಶಕ್ತಿವರ್ಧಕ,ಹೃದ್ರೋಗ ನಿವಾರಕವಾದ ಚಂದ್ರಿಕಾ ಉಪಯುಕ್ತ ಗಿಡ.
  4. ಕೂಷ್ಮಾಂಡ: ಕುಂಬಳ.ಇದು ಪುಷ್ಟಿಕಾರಕ,ವೀರ್ಯವರ್ಧಕ,ರಕ್ತಸಂಬಂಧೀ ಸಮಸ್ಯೆಗಳ ಪರಿಹಾರಕ ಮತ್ತು ಉದರ ಶುದ್ಧಿಗೆ ಸಹಾಯಕ. ಮಾನಸಿಕವಾಗಿ ಅಬಲರಾದವರಿಗೆ ಇದು ದಿವ್ಯೌಷಧ. ಶರೀರದ ವೀಶೇಷವಾಗಿ ಹೃದಯ ಸಂಬಂಧೀ ಕಾಯಿಲೆಗಳಿಗೆ ರಾಮಬಾಣದಂತಿದೆ.
  5. ಸ್ಕಂದಮಾತಾ ಯಾ ಅಲಸೀ: ಅಗಸೆ ಬೀಜ. ವಾತ,ಪಿತ್ತ,ಕಫಗಳ ನಿಯಂತ್ರಣದಲ್ಲಿ ಸಹಾಯಕ.
    “ಅಲಸೀ ನೀಲಪುಷ್ಪೀ ಪಾವರ್ತತೀ ಸ್ಯಾದುಮಾ ಕ್ಷುಮಾ|
    ಅಲಸೀ ಮಧುರಾ ತಿಕ್ತಾ ಸ್ತ್ರಿಗ್ಧಪಾಕೇ ಕದರ್ಗರುಃ||
    ಉಷ್ಣಾ ದೃಷ ಶುಕವಾತಂಧೀ ಕಫ ಪಿತ್ತ ವಿನಾಶಿನೀ||
  6.  ಷಷ್ಠಮ ಕಾತ್ಯಾಯನೀ ಯಾ ಮೋಯಿಯಾ:ಅಂಬಾ,ಅಂಬಾಲಿಕಾ,ಅಂಬಿಕಾ,ಮಾಚಿಕಾ ಇತರ ಹೆಸರುಗಳು.ಇದು ಕಫ,ಪಿತ್ತ ಮತ್ತು ಕಂಠ ಸಂಬಂಧೀ ಕಾಯಿಲೆಗಳ ನಿವಾರಣೆಗೆ ಸಹಾಯಕ.
  7.  ಸಪ್ತಮ ಕಾಲರಾತ್ರೀ ಯಾ ನಾಗದೌನ್: ಸರ್ವರೋಗ ನಿವಾರಕ.ಮಸ್ತಿಷ್ಕದ ಎಲ್ಲಾ ವಿಕಾರಗಳನ್ನು ನಿವಾರಿಸಿ ವಿಜಯಶಾಲಿಗಳನ್ನಾಗಿಸುವುದು.ವಿಷ ನಿವಾರಕವೂ ಹೌದು.
  8. ತುಲಸೀ: ಏಳುವಿಧಗಳಿವೆ.ರಕ್ತಶುದ್ಧಿ,ಹೃದ್ರೋಗ ನಿವಾರಣೆಗೆ ಸಹಾಯಕ.
    ತುಲಸೀ ಸುರಸಾ ಗ್ರಾಮ್ಯಾ ಸುಲಭಾ ಬಹುಮಂಜರೀ|
    ಅಪೇತರಾಕ್ಷಸೀ ಮಹಾಗೌರೀ ಶೂಲಘ್ನೀ ದೇವದುಂದುಭಿಃ||
    ತುಲಸೀ ಕಟುಕಾ ತಿಕ್ತಾಹುಧ ಉಷ್ಣಾಹಾಹಪಿಪಿತ್ತಕೃತ್|
    ಮರುದನಿಪ್ರದೋ ಹಧ ತೀಕ್ಷ್ಣಾಷ್ಣಃ ಪಿತ್ತಲೋ ಲಘುಃ||
  9. ನವಮ ಶತಾವರೀ: ನಾರಾಯಣೀ ಎಂದೂ ಕರೆಯುತ್ತಾರೆ.ಬುದ್ಧಿ-ವೀರ್ಯಬಲಗಳನ್ನು ಹೆಚ್ಚಿಸುವುದು.ಹೃದ್ಬಲ ವರ್ಧಕ.ರಕ್ತವಿಕಾರ ನಾಶಕ.ಸಿದ್ಧಿದಾತ್ರಿಯಾದ ಇದನ್ನು ನಿಯಮಾನುಸಾರ ಸೇವಿಸಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತವೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments