Sunday, September 8, 2024
Google search engine
Homeತಾಜಾ ಸುದ್ದಿನಟ ದರ್ಶನ್ ಗೆ ಹಲವು ಗ್ರಹಗತಿಗಳ ಕಾಟ: ಸದ್ಯಕ್ಕೆ ಇಲ್ಲವಾ ಬಿಡುಗಡೆ ಭಾಗ್ಯ?

ನಟ ದರ್ಶನ್ ಗೆ ಹಲವು ಗ್ರಹಗತಿಗಳ ಕಾಟ: ಸದ್ಯಕ್ಕೆ ಇಲ್ಲವಾ ಬಿಡುಗಡೆ ಭಾಗ್ಯ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಲವು ದೋಷಗಳು ಏಕಕಾಲದಲ್ಲಿ ಕಾಡುತ್ತಿದ್ದು, ಇದೀಗ ಶನಿಕಾಟ ಆರಂಭವಾಗಿರುವುದರಿಂದ ಸದ್ಯದಲ್ಲೇ ಜೈಲಿನಿಂದ ಹೊರಗೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಗೆ ಗ್ರಹಗತಿಗಳು ಕಾಡತೊಡಗಿದ್ದು, ದೃಷ್ಟಿ ದೋಷ, ಮನೆಯ ವಾಸ್ತು ದೋಷ, ಸರ್ಪ ದೋಷ ಹಾಗೂ ಇದೀಗ ಶನಿಕಾಟ ಆರಂಭವಾಗಿದೆ. ಒಂದರ ಹಿಂದೆ ಒಂದರಂತೆ ಜಾತಕದಲ್ಲಿ ದೋಷ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಕಷ್ಟದಿಂದ ಹೊರಗೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.

ದೋಷ ಪರಿಹಾರ ಮಾಡಿಕೊಳ್ಳದಿದ್ದರೆ ದರ್ಶನ್ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದ್ದು, ಜೈಲಿನಿಂದ ಹೊರಗೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಜಾತಕದಲ್ಲಿ ಹಲವು ಗ್ರಹಗತಿಗಳ ದೋಷಗಳ ಪರಿಹಾರಕ್ಕಾಗಿ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ನವ ಚಂಡಿಕಾ ಹೋಮಾದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ದರ್ಶನ್ ಗೆ ಸಾಡೇ ಸಾತಿ ಶನಿಕಾಟ ನಡೆಯುತ್ತಿದ್ದು, ಚಂಡಿಕಾ ಹೋಮಾ ಪೂಜೆಯಿಂದ ದರ್ಶನ್ ಗೆ ಫಲ ಸಿಗುತ್ತದಾ ಎಂಬ ಕುತೂಹಲ ಮೂಡಿದೆ. ಚಂಡಿಕಾ ಹೋಮಾ ಪೂಜಾ ಫಲ ಸಿಕ್ಕರೆ 15 ದಿನದಲ್ಲಿ ದರ್ಶನ್ ಗೆ ಬಿಡುಗಡೆ ಭಾಗ್ಯ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಗ್ರಹಗತಿಗಳ ದೋಷದಿಂದ ದರ್ಶನ್ ಸ್ನೇಹ ಸಂಬಂಧದಲ್ಲೂ ಬಿರುಕು ಬಿಡುವ ಸಾಧ್ಯತೆ ಇದೆ. ದ್ವೇಷ, ಕ್ರೋಧವೇ ಹೆಚ್ಚಾಗಲಿದೆ. ಅಲ್ಲದೇ ಕ್ರೋಧ ಸಂವತ್ಸರದಲ್ಲಿ ಕ್ರೋಧದಿಂದಲೇ ಸಮಸ್ಯೆಗಳು ಸೃಷ್ಟಿಯಾಗಲಿವೆ. ಈ ಕಾರಣದಿಂದ ಈ ವರ್ಷದವರೆಗೆ ಜಾಮೀನು ಸಿಗುವುದು ಕಷ್ಟ ಎಂದೂ ಹೇಳಲಾಗುತ್ತಿದೆ.

ಸರ್ಪದೋಷ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಬೇಕಿದೆ. ಅಲ್ಲದೇ ಇದಕ್ಕಾಗಿ ದರ್ಶನ್ ಕೆಲವು ತಿಂಗಳ ಕಾಲ ಮಾಂಸಹಾರ ತ್ಯಜಿಸಬೇಕಾಗಿದೆ. ಅಲ್ಲದೇ ಕುಟುಂಬದವರ ಸಲಹೆಯಂತೆ ನಡೆದುಕೊಳ್ಳಬೇಕಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments