Sunday, September 8, 2024
Google search engine
Homeತಾಜಾ ಸುದ್ದಿಸರ್ದಾರ್-2 ಚಿತ್ರೀಕರಣದ ವೇಳೆ ದುರಂತ: 20 ಅಡಿ ಮೇಲಿಂದ ಬಿದ್ದು ಸಾಹಸ ಕಲಾವಿದ ಸಾವು!

ಸರ್ದಾರ್-2 ಚಿತ್ರೀಕರಣದ ವೇಳೆ ದುರಂತ: 20 ಅಡಿ ಮೇಲಿಂದ ಬಿದ್ದು ಸಾಹಸ ಕಲಾವಿದ ಸಾವು!

ನಟ ಕಾರ್ತಿ ಮತ್ತು ನಿರ್ದೇಶಕ ಪಿಎಸ್ ಮಿಥುನ್ ಕಾಂಬಿನೇಷನ್ ನಲ್ಲಿ ಸರ್ದಾರ್-2 ಚಿತ್ರೀಕರಣದ ವೇಳೆ ಸಹಾಸ ಕಲಾವಿದ ಎಜುಮಲೈ 20 ಅಡಿ ಮೇಲಿಂದ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಚೆನ್ನೈನ ಸಾಲಿಗ್ರಾಮದಲ್ಲಿನ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಜುಲೈ 15ರಂದು ನಡೆದ ಸರ್ದಾರ್-2 ಚಿತ್ರದ ಸಾಹದ ದೃಶ್ಯದ ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದೆ ಎಂದು ಚಿತ್ರ ತಂಡ ಅಧಿಕೃತವಾಗಿ ಪ್ರಕಟಿಸಿದೆ.

ಜುಲೈ 15ರಂದು ಚಿತ್ರೀಕರಣದ ವೇಳೆ 20 ಅಡಿ ಮೇಲಿಂದ ಬಿದ್ದ 54 ವರ್ಷದ ಎಜುಮಲೈ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೇಹದ ಒಳಗೆ ರಕ್ತಸ್ರಾವಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ನಿಧನರಾಗಿದ್ದಾರೆ.

ಕಾರ್ತಿ ನಟಿಸುತ್ತಿರುವ ಸರ್ದಾರ್-2 ಚಿತ್ರದ ಮುಹೂರ್ತ ಜುಲೈ 12ರಂದು ನಡೆದಿದ್ದು, ಮೊದಲ ಹಂತದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಹಮ್ಮಿಕೊಂಡಿತ್ತು. ಚಿತ್ರೀಕರಣಕ್ಕಾಗಿ ಎಲ್ ವಿ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗಿತ್ತು.

ವೀರುಬಾಕಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments