Saturday, September 21, 2024
Google search engine
Homeಅಪರಾಧಬೆಂಗಳೂರಿನಲ್ಲಿ ಪತ್ನಿಯನ್ನು 30 ತುಂಡುಗಳಾಗಿ ಕತ್ತರಿಸಿ ಫಿಡ್ಜ್ ನಲ್ಲಿ ಶವ ಬಚ್ಚಿಟ್ಟು ಪತಿ ಪರಾರಿ!

ಬೆಂಗಳೂರಿನಲ್ಲಿ ಪತ್ನಿಯನ್ನು 30 ತುಂಡುಗಳಾಗಿ ಕತ್ತರಿಸಿ ಫಿಡ್ಜ್ ನಲ್ಲಿ ಶವ ಬಚ್ಚಿಟ್ಟು ಪತಿ ಪರಾರಿ!

ಪತ್ನಿಯನ್ನು ಕೊಂದು 30 ತುಂಡುಗಳಾಗಿ ಕತ್ತರಿಸಿ ಫಿಡ್ಜ್ ನಲ್ಲಿ ಇರಿಸಿ ಪತಿ ಪರಾರಿಯಾಗಿರುವ ಭೀಕರ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ನೇಪಾಳ ಮೂಲದ ಮಹಾಲಕ್ಷ್ಮೀ (29) ಹತ್ಯೆಯಾಗಿದ್ದು, ಪತಿ ಹುಕುಂ ಸಿಂಗ್ ರಾಣಾ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ದಂಪತಿಗೆ ಮಗು ಇದ್ದು, ನೆಲಮಂಗಲದಲ್ಲಿ ವಾಸವಾಗಿದ್ದರು. 5 ತಿಂಗಳ ಹಿಂದೆ ಮಗು ಹಾಗೂ ಪತಿಯನ್ನು ತೊರೆದು ಮಹಾಲಕ್ಷ್ಮೀ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ನೆಲೆಸಿದ್ದಳು.

ಮಹಾಲಕ್ಷ್ಮೀಯನ್ನು ಕೊಂದ ಪತಿ ಯಾರಿಗೂ ಅನುಮಾನ ಬರಬಾರದು ಎಂದು 30 ತುಂಡುಗಳಾಗಿ ಕತ್ತರಿಸಿ ಫಿಡ್ಜ್ ನಲ್ಲಿ ಇರಿಸಿದ್ದ. ಅಲ್ಲದೇ ಯಾರಿಗೂ ಅನುಮಾನ ಬರಬಾರದು ಎಂದು ರಾಸಯನಿಕ ಬೆರೆಸಿದ್ದ. ಇದರಿಂದ ಯಾರಿಗೂ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

bengaluru murder case
bengaluru murder case

ಸೆಪ್ಟೆಂಬರ್ 2ರಿಂದ ಮಹಾಲಕ್ಷ್ಮೀ ಪೋಷಕರು ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅಕ್ಕಪಕ್ಕದವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ಮಹಿಳೆ ಮಲ್ಲೇಶ್ವರ ಸಮೀಪದ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದು ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ವಯ್ಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ಹಾಗೂ ಎಫ್ ಎಸ್ ಎಲ್ ಲ್ಯಾಬ್ ಗೆ ಮಾದರಿ ಕಳುಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments