ಪೆಹಲ್ಗಾವ್ ದಾಳಿ ನಂತರ ಪಾಕಿಸ್ತಾನದ ವಿಮಾನಗಳು ಭಾರತದ ವಾಯು ಪ್ರದೇಶ ಪ್ರವೇಶ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ವಾಯು ಪ್ರದೇಶ ರದ್ದುಗೊಳಿಸಿದ ಪಾಕಿಸ್ತಾನಕ್ಕೆ ಭಾರತ ದಿಟ್ಟ ತಿರುಗೇಟು ನೀಡಿದೆ.
ಪೆಹಲ್ಗಾವ್ ದಾಳಿ ನಂತರ ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹಲವು ಕ್ರಮ ಕೈಗೊಳ್ಳಲು ಮುಂದಾಗಿರುವ ಭಾರತ ಇದೀಗ ಭಾರತದ ವಾಯು ಪ್ರದೇಶ ನಿರ್ಬಂಧಿಸುವ ತೀರ್ಮಾನ ಕೈಗೊಂಡಿದೆ.
ಪಾಕಿಸ್ತಾನದ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಬಳಕೆ ನಿಷೇಧಿಸಿದ 6 ದಿನಗಳ ನಂತರ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ.
ಪಾಕಿಸ್ತಾನ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಬಳಕೆ ನಿಷೇಧಿಸಿದ್ದರಿಂದ ಭಾರತದ ವಿಮಾನಗಳ ವೆಚ್ಚ ಹೆಚ್ಚಳವಾಗಿದ್ದು, ಇದರಿಂದ ಪ್ರಯಾಣ ದರದಲ್ಲಿ ಏರಿಕೆ ಮಾಡಲಾಗಿದೆ.
ಈ ಘಟನೆಗಳ ಬೆನ್ನಲ್ಲೇ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಪರಮಾಧಿಕಾರ ನೀಡಲಾಗಿತ್ತು.


