Thursday, September 19, 2024
Google search engine
Homeತಾಜಾ ಸುದ್ದಿತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವಾಯಿತು: ರಾಹುಲ್ ಗಾಂಧಿ

ತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವಾಯಿತು: ರಾಹುಲ್ ಗಾಂಧಿ

ತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವು ಆಯಿತು ಎಂದು ಕೇರಳದ ದುರಂತ ಪೀಡಿತ ವಯನಾಡಿಗೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿರುವ ವಯನಾಡಿಗೆ ಗುರುವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಸಮಾಧಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಮಾತ್ರವಲ್ಲ, ದೇಶದಲ್ಲೇ ದೊಡ್ಡ ದುರಂತವಾಗಿದೆ. ನನ್ನ ತಂದೆಯನ್ನು ಕಳೆದುಕೊಂಡಾಗ ಅದಷ್ಟು ನೋವಾಯಿತು. ಆದರೆ ಇವರು ಕೇವಲ ತಂದೆಯನ್ನು ಮಾತ್ರವಲ್ಲ ಕುಟುಂಬದ ಹಲವು ಸದಸ್ಯರನ್ನೇ ಕಳೆದುಕೊಂಡಿದ್ದಾರೆ ಎಂದರು.

ದುರಂತದಲ್ಲಿ ಎಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಎಷ್ಟೋ ಜನರು ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವುದು ನೋಡಿ ನೋವಾಯಿತು. ನಾವು ಬದುಕುಳಿದವರಿಗೆ ಏನು ಪರಿಹಾರ ಸಿಗಬೇಕೋ ಅದನ್ನು ಆದಷ್ಟು ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸಾಕಷ್ಟು ಕೆಲಸಗಳು ಆಗಬೇಕಿದೆ. ಆದರೆ ಸಾಕಷ್ಟು ಶ್ರಮ ವಹಿಸುತ್ತಿರುವ ಆಡಳಿತ ವ್ಯವಸ್ಥೆ, ವೈದ್ಯರು, ನರ್ಸ್, ಸ್ವಯಂ ಸೇವಕರಿಗೆ ಧನ್ಯವಾದಗಳು. ಇಡೀ ದೇಶವೇ ವಯನಾಡಿನ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಅವರು ಹೇಳಿದರು.

ವಯನಾಡಿನಲ್ಲಿ ಭೂಕುಸಿತ ಸಂಭವಿಸುತ್ತಲೇ ಇದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 300ಕ್ಕೇರಿದೆ. ಭೂಕುಸಿತ ಸಂಭವಿಸಿದ ಮೊದಲ ಗ್ರಾಮವನ್ನು ಇನ್ನೂ ರಕ್ಷಣಾ ಪಡೆಗಳು ತಲುಪಲು ಸಾಧ್ಯವಾಗಿಲ್ಲ ಅಂದರೆ ಪರಿಸ್ಥಿತಿಯ ಭೀಕರತೆ ಅರಿವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments