Monday, October 7, 2024
Google search engine
Homeಕ್ರೀಡೆಆರ್ ಸಿಬಿಯಿಂದ ಬೆಂಗಳೂರಿನ 2 ಕೆರೆಗಳಿಗೆ ಪುನಶ್ಚೇತನ: ಸ್ಥಳೀಯರಿಗೆ ಹಸ್ತಾಂತರ!

ಆರ್ ಸಿಬಿಯಿಂದ ಬೆಂಗಳೂರಿನ 2 ಕೆರೆಗಳಿಗೆ ಪುನಶ್ಚೇತನ: ಸ್ಥಳೀಯರಿಗೆ ಹಸ್ತಾಂತರ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿನ ಎರಡು ಕೆರೆಗಳಿಗೆ ಪುನಶ್ಚೇತನ ನೀಡಿ ಸ್ಥಳೀಯರಿಗೆ ಹಸ್ತಾಂತರಿಸಿ ಪರಿಸರ ಕಾಳಜಿ ಮೆರೆದಿದೆ.

ಐಪಿಎನ್ ಕ್ರಿಕೆಟ್ ತಂಡವಾಗಿರುವ ಆರ್ ಸಿಬಿ ಗೋ ಗ್ರೀನ್ ಯೋಜನೆಯಡಿ ಬೆಂಗಳೂರಿನ ಇಟ್ಟಗಲ್ ಪುರ ಮತ್ತು ಸಂಡೇನಹಳ್ಳಿ ಕೆರೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಮೂಲಕ ಪರಿಸರ ಕಾಳಜಿ ಮೆರೆದಿದೆ. ತುಂಬಿದ ಕೆರೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.

ಸ್ಥಳೀಯರ ನೀರಿನ ಸಮಸ್ಯೆ ಹಾಗೂ ನೀರಿನ ರಕ್ಷಣೆ ಉದ್ದೇಶದಿಂದ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಆರ್ ಸಿಬಿ 2023ರಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಯಶಸ್ವಿಯಾಗಿ ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆರ್ ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್ ತಿಳಿಸಿದ್ದಾರೆ.

ಇಂಡಿಯಾ ಕೇರ್ಸ್ ಫೌಂಡೇಷನ್ ಮತ್ತು ಫ್ರೆಂಡ್ಸ್ ಆಫ್ ಲೇಕ್ಸ್ ಜೊತೆಗೂಡಿ ಆರ್ ಸಿಬಿ ಕೆರೆಗಳನ್ನು ಅಭಿವೃದ್ದಿಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments