Monday, September 16, 2024
Google search engine
Homeಅಪರಾಧಪತ್ನಿಯ ಮೊಬೈಲ್ ಗೀಳು ತಾಳಲಾರದೇ ಕೊಂದ ಪಾಪಿ ಪತಿ!

ಪತ್ನಿಯ ಮೊಬೈಲ್ ಗೀಳು ತಾಳಲಾರದೇ ಕೊಂದ ಪಾಪಿ ಪತಿ!

ಪತ್ನಿಯ ರೀಲ್ಸ್ ಗೀಳು ಸಹಿಸದ ಪತಿ ಆಕೆಯನ್ನು ಹೊಡೆದು ಕೊಂದ ಆಘಾತಕಾರಿ ಘಟನೆ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ಈ ಘಟನೆ ನಡೆದಿದೆ. ಬೀದರ್ ಮೂಲದ ಜಯಶ್ರೀ ಹತ್ಯೆಯಾಗಿದ್ದು, ಪತಿ ಕಿರಣ್ ಉಪಾಧ್ಯಾಯ ಕೊಲೆ ಮಾಡಿ ಕೋಟ ಪೊಲೀಸರ ವಶದಲ್ಲಿದ್ದಾನೆ.

ಇನ್ ಸ್ಟಾಗ್ರಾಂನಲ್ಲಿ ಕೇವಲ 16 ಫಾಲೋವರ್ಸ್ ಹೊಂದಿದ್ದ ಜಯಶ್ರೀ ಪದೇಪದೆ ರೀಲ್ಸ್ ಮಾಡುತ್ತಿದ್ದಳು. ಗುರುವಾರ ರಾತ್ರಿ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ವಿಚಾರದಲ್ಲಿ ಜಗಳ ಆರಂಭವಾಗಿದ್ದು, ಕಿರಣ್ ಹೊಡೆದು ಪತ್ನಿಯನ್ನು ಕೊಂದಿದ್ದಾನೆ.

ಬೀದರ್ ಜಿಲ್ಲೆಯ ದಂಬಳಾಪುರ ನಿವಾಸಿ ಕಿರಣ್ ಪತ್ನಿ ಜಯಶ್ರೀ 9 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಕಳೆದ 3 ತಿಂಗಳಿನಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ತಾರಾನಾಥ ಹೊಳ್ಳ ಅವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ನಲ್ಲಿ ರೀಲ್ಸ್ ಮಾಡುತ್ತಿದ್ದರು. ಇದಲ್ಲದೆ ಆನ್ ಲೈನ್ ವ್ಯವಹಾರದಲ್ಲಿ ಮುಳುಗಿರುತ್ತಿದ್ದ ಪತ್ನಿಯಿಂದ ಕಿರಣ್ ಬೇಸತ್ತಿದ್ದ ಎಂದು ಹೇಳಲಾಗಿದೆ.

ಪ್ರತೀ ದಿನ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಗುರುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಶುರುವಾಗಿದ್ದ ಜಗಳ ಶುಕ್ರವಾರ ಮುಂಜಾನೆ ತನಕ ನಡೆದು ಪತಿ ಕತ್ತಿಯಿಂದ ಪತ್ನಿ ಹಲ್ಲೆ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿನ ನಡೆಸಿ ಆರೋಪಿ ಪತಿ ಕಿರಣ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments