Saturday, September 28, 2024
Google search engine
Homeತಾಜಾ ಸುದ್ದಿತಮಿಳುನಾಡು ಸಚಿವ ಸಂಪುಟ ಪುನರಚನೆ: ಉದಯನಿಧಿ ಡಿಸಿಎಂ ಆಗಿ ಬಡ್ತಿ

ತಮಿಳುನಾಡು ಸಚಿವ ಸಂಪುಟ ಪುನರಚನೆ: ಉದಯನಿಧಿ ಡಿಸಿಎಂ ಆಗಿ ಬಡ್ತಿ

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡು ಸಚಿವ ಸಂಪುಟ ಪುನರಚನೆ ಮಾಡಿದ್ದು, ಪುತ್ರ ಹಾಗೂ ನಟ ಉದಯನಿಧಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ಬಡ್ತಿ ನೀಡಿದ್ದಾರೆ.

ಕ್ರೀಡಾ ಸಚಿವರಾಗಿದ್ದ ಉದಯನಿಧಿ ಸ್ಟಾಲಿನ್ ಗೆ ಶನಿವಾರ ನಡೆದ ಸಚಿವ ಸಂಪುಟ ಪುನರಚನೆಯಲ್ಲಿ ಡಿಸಿಎಂ ಆಗಿ ಬಡ್ತಿ ನೀಡಲಾಗಿದ್ದು, ಹೆಚ್ಚುವರಿಯಾಗಿ ಯೋಜನೆ ಮತ್ತು ಅಭಿವೃದ್ಧಿ ಖಾತೆ ನೀಡಲಾಗಿದೆ.

ರಾಜ್ಯಪಾಲ ಆರ್.ಎನ್. ರವಿಗೆ ಕಳುಹಿಸಿದ ಶಿಫಾರಸು ಪತ್ರದಲ್ಲಿ ನೂತನ ಸಂಪುಟ ಪುನರಚನೆ ಪ್ರಸ್ತಾಪಿಸಲಾಗಿದ್ದು, ವಿವಾದಾತ್ಮಕ ಹೇಳಿಕೆಗಳಿಂದ ಗಮನ ಸೆಳೆದಿದ್ದ ಉದಯನಿಧಿ ಸ್ಟಾಲಿನ್ ಗೆ ಉಪ ಮುಖ್ಯಮಂತ್ರಿ ಮಾಡುವುದಾಗಿ ತಿಳಿಸಿದ್ದರು. 6 ಸಚಿವರಿಗೆ ಹೊಸ ಖಾತೆಗಳನ್ನು ನೀಡುವ ಮೂಲಕ ಮರು ವಿಂಗಡಣೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments