Monday, September 16, 2024
Google search engine
Homeಕ್ರೀಡೆಐಪಿಎಲ್ ಉಳಿಸಲು ಆರ್ ಸಿಬಿ ಮಾರಾಟ ಮಾಡಿ: ಟೆನಿಸ್ ಆಟಗಾರ ಬಿಸಿಸಿಐಗೆ ಮನವಿ

ಐಪಿಎಲ್ ಉಳಿಸಲು ಆರ್ ಸಿಬಿ ಮಾರಾಟ ಮಾಡಿ: ಟೆನಿಸ್ ಆಟಗಾರ ಬಿಸಿಸಿಐಗೆ ಮನವಿ

ಐಪಿಎಲ್ ಉಳಿಯಬೇಕಾದರೆ, ಕ್ರೀಡೆ ಉಳಿಯಬೇಕಾದರೆ ಆರ್ ಸಿಬಿಯನ್ನು ಬೇರೋಬ್ಬ ಮಾಲೀಕರಿಗೆ ಮಾರಾಟ ಮಾಡಿ ಎಂದು ಟೆನಿಸ್ ದಂತಕತೆ ಮಹೇಶ್ ಭೂಪತಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 287 ರನ್ ಬಿಟ್ಟುಕೊಟ್ಟ ಆರ್ ಸಿಬಿ ವಿರಾಟ್ ಕೊಹ್ಲಿ. ಫಾಫ್ ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಅವರ ಭರ್ಜರಿ ಬ್ಯಾಟಿಂಗ್ ನಿಂದ 262 ರನ್ ಕಲೆ ಹಾಕಿತ್ತು. ಆದರೂ ಆರ್ ಸಿಬಿ 25 ರನ್ ಗಳಿಂದ ಸೋಲುಂಡಿತ್ತು.

ಆರ್ ಸಿಬಿ ತಂಡವನ್ನು ಆಡಳಿತ ಮಂಡಳಿ ಸರಿಯಾಗಿ ರೂಪಿಸುತ್ತಿಲ್ಲ. ಇತರೆ ಫ್ರಾಂಚೈಸಿಗಳು ತಮ್ಮ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದ್ದರೆ ಆರ್ ಸಿಬಿ ತಂಡದಲ್ಲಿ ಯಾವುದೇ ಯೋಜನೆ ಕಂಡು ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಆರ್ ಸಿಬಿ ತಂಡದ ಮಾಲೀಕ ವಿಜಯ್ ಮಲ್ಯ ಭಾರತದಿಂದ ಗಡಿಪಾರಾಗಿದ್ದು, ಲಂಡನ್ ನಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬರಲು ಅವಕಾಶ ಇಲ್ಲದ ಕಾರಣ ಅವರ ಆಡಳಿತ ಮಂಡಳಿ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇವೆ.

ಆರ್ ಸಿಬಿ ತಂಡ ಪ್ರಸ್ತುತ ಐಪಿಎಲ್ ನಲ್ಲಿ ಸತತ 5 ಪಂದ್ಯ ಸೋಲು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಈಗಿನ ಪರಿಸ್ಥಿತಿಯಲ್ಲಿ ಆರ್ ಸಿಬಿ ಪ್ಲೇಆಫ್ ಗೆ ಅರ್ಹತೆ ಪಡೆಯುವುದು ಕಷ್ಟವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments