Monday, July 1, 2024
Google search engine
Homeತಾಜಾ ಸುದ್ದಿಕಾಲಿನ ಶಸ್ತ್ರಚಿಕಿತ್ಸೆಗೆ ಬಂದ ಬಾಲಕನ ಮರ್ಮಾಂಗವನ್ನೇ ತೆಗೆದ ವೈದ್ಯರು!

ಕಾಲಿನ ಶಸ್ತ್ರಚಿಕಿತ್ಸೆಗೆ ಬಂದ ಬಾಲಕನ ಮರ್ಮಾಂಗವನ್ನೇ ತೆಗೆದ ವೈದ್ಯರು!

ಗಾಯಗೊಂಡಿದ್ದ ಬಾಲಕ ಕಾಲಿನ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಲಕನಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರ್ಮಾಂಗವನ್ನೇ ಕತ್ತರಿಸಿ ತೆಗೆದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ ಜಿಲ್ಲೆಯಲ್ಲಿ ನಡೆದಿದೆ.

ಮೈದಾನದಲ್ಲಿ ಆಡುತ್ತಿದ್ದ 9 ವರ್ಷದ ಬಾಲಕ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಕಾಲಿನ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಕಾಲಿನ ಶಸ್ತ್ರಚಿಕಿತ್ಸೆಗೆ ಬಂದ ಸರ್ಕಾರಿ ವೈದ್ಯರು ಜನನಾಂಗವನ್ನೇ ತೆಗೆದಿದ್ದಾರೆ.

ಕಾಲಿನ ಶಸ್ತ್ರಚಿಕಿತ್ಸೆಗೆ ಬಂದ ವೈದ್ಯರು ಗಾಯಗೊಂಡ ಕಾಲಿನ ಜಾಗಕ್ಕಿಂತ ಮೇಲಿನ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ತಪ್ಪು ಮಾಡಿರುವುದನ್ನು ತಿಳಿಯುತ್ತಿದ್ದಂತೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಸ್ತ್ರಚಿಕಿತ್ಸೆ ನಂತರ ಪೋಷಕರು ಮಗನ ಪರಿಸ್ಥಿತಿ ಕಂಡು ಆಘಾತಗೊಂಡಿದ್ದು, ಪೊಲೀಸರಿಗೆ ವೈದ್ಯರ ಎಡವಟ್ಟಿನ ಕುರಿತು ದೂರು ನೀಡಿದ್ದಾರೆ. ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ವಿಚಾರಣೆ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಕರಣದ ತನಿಖೆಗೆ ಆದೇಶಿಸಿದ್ದೇವೆ. ಬಾಲಕನ ಕಾಲಿಗೆ ಶಸ್ತ್ರಚಿಕಿತ್ಸೆ ವೇಳೆ ಆತನ ಜನನಾಂಗದಲ್ಲೂ ಸಮಸ್ಯೆ ಕಂಡು ಬಂದಿತ್ತು. ಆದ್ದರಿಂದ ವೈದ್ಯರು ಅದಕ್ಕೂ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಬೆಳಗ್ಗೆ ಏಳುವಷ್ಟರಲ್ಲಿ ಹೆಣ್ಣಾಗಿದ್ದ ಘಟನೆ ಮಾಸುವ ಮುನ್ನವೇ ಇಂತಹ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments