Thursday, September 19, 2024
Google search engine
Homeತಾಜಾ ಸುದ್ದಿವಂದೇ ಭಾರತ್ ರೈಲಿನ 3 ಬೋಗಿಯ ಗಾಜಿಗೆ ಹಾನಿ: 5 ಮಂದಿ ಅರೆಸ್ಟ್

ವಂದೇ ಭಾರತ್ ರೈಲಿನ 3 ಬೋಗಿಯ ಗಾಜಿಗೆ ಹಾನಿ: 5 ಮಂದಿ ಅರೆಸ್ಟ್

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ಎಸೆದು ಮೂರು ಬೋಗಿಗಳ ಗಾಜು ಹೊಡೆದು ಹಾಕಿದ 5 ಮಂದಿಯನ್ನು ಛತ್ತೀಸಗಢದಲ್ಲಿ ಬಂಧಿಸಲಾಗಿದೆ.

ಸೋಮವಾರವಷ್ಟೇ ಪ್ರಧಾನಿ ಮೋದಿ ಚಾಲನೆ ನೀಡಿದ್ದ ಛತ್ತೀಸಗಢದ ಡ್ರಗ್ ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣ ನಡವಿನ ವಂದೇ ಭಾರತ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ.

ವಿಶಾಖಪಟ್ಟಣದಿಂದ ಛತ್ತೀಸಗಢಕ್ಕೆ ಶನಿವಾರ ಮರಳುತ್ತಿದ್ದಾಗ ಬಾಗ್ಬಾರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲು ಗಾಜಿಗೆ ಹಾನಿಯಾಗಿದ್ದರೂ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂ ರೈಲಿನ ಮೂರು ಬೋಗಿಗಳ ಗಾಜುಗಳಿಗೆ ಹಾನಿಯಾಗಿದ್ದು, 5 ಮಂದಿಯನ್ನು ಗುರುತಿಸಿ ಬಂಧಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments