ಮುಂಬೈ: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ದಂತಕಥೆ ಸುನಿಲ್ ಗವಾಸ್ಕರ್ ಸಹಾಯ ಹಸ್ತ ಚಾಚಿದ್ದಾರೆ.
ಗವಾಸ್ಕರ್ ತಮ್ಮ ಚಾಂಪ್ಸ್ ಫೌಂಡೇಶನ್ ಹೆಸರಲ್ಲಿ ಕಾಂಬ್ಳಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಈ ಫೌಂಡೇಶನ್ ಮೂಲಕ ಅವರು ಅಗತ್ಯವಿರುವ ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಹಾಯ ಮಾಡುತ್ತಾರೆ.
1999ರಲ್ಲಿ ಪ್ರಾರಂಭವಾದ ಫೌಂಡೇಶನ್, ಕಠಿಣ ಸಮಯದಲ್ಲಿ ಕಾಂಬ್ಳಿ ಅವರಿಗೆ ಆರ್ಥಿಕ ನೆರವು ನೀಡಿದೆ. ಏಪ್ರಿಲ್ 1 ರಿಂದ ಅವರು ತಮ್ಮ ಜೀವನದುದ್ದಕ್ಕೂ ಮಾಸಿಕ 30,000 ರೂ.ಗಳ ಸಹಾಯವನ್ನು ಪಡೆಯಲಿದ್ದಾರೆ.
ಮೂತ್ರದ ಸೋಂಕು ಮತ್ತು ಸೆಳೆತದ ದೂರುಗಳ ನಂತರ ಭಾರತದ ಮಾಜಿ ಕ್ರಿಕೆಟಿಗ ಕಾಂಬ್ಳಿ ಕಳೆದ ವರ್ಷ ಡಿಸೆಂಬರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಜನವರಿ 1ರಂದು ಡಿಸ್ಚಾರ್ಜ್ ಆಗುವ ಮೊದಲು ಅವರು ಸುಮಾರು ಎರಡು ವಾರಗಳ ಕಾಲ ಠಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಕಾಂಬ್ಳಿ ಕಳೆದ ಕೆಲವು ವರ್ಷಗಳಿಂದ ಹಲವಾರು ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. 2013ರಲ್ಲಿ ಅವರು ಎರಡು ಹೃದಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು.
ಕಳೆದ ವರ್ಷ ಡಿಸೆಂಬರಲ್ಲಿ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದಾಗ ಕಾಂಬ್ಳಿ ಮತ್ತೆ ಸುದ್ದಿಯಲ್ಲಿದ್ದರು.
1993-2000ರ ನಡುವೆ ಭಾರತಕ್ಕಾಗಿ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿದ ಮಾಜಿ ಎಡಗೈ ಬ್ಯಾಟ್ಸ್ ಮನ್ ಕಾಂಬ್ಳಿ ಕಠಿಣ ಸಮಯದಲ್ಲಿ, ಗವಾಸ್ಕರ್ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ಈಗ ಅವರು ತಮ್ಮ ಭರವಸೆಯನ್ನು ಪೂರೈಸಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಕಾಂಬ್ಳಿ ಅವರನ್ನು ಭೇಟಿಯಾದ ನಂತರ ಅವರ ವೈದ್ಯರನ್ನು ಗವಾಸ್ಕರ್ ಭೇಟಿಯಾದರು ಮತ್ತು ಅವರಿಗೆ ತಕ್ಷಣ ಸಹಾಯ ನೀಡುವಂತೆ ತಮ್ಮ ಪ್ರತಿಷ್ಠಾನಕ್ಕೆ ಸೂಚನೆ ನೀಡಿದರು. ಗವಾಸ್ಕರ್ ಅವರ ದೀರ್ಘಕಾಲದ ಸ್ನೇಹಿತ ಮತ್ತು ಮಾಜಿ ನಿರ್ಲಾನ್ ತಂಡದ ಸಹ ಆಟಗಾರ ಅನಿಲ್ ಜೋಶಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.


