Thursday, October 3, 2024
Google search engine
Homeಅಪರಾಧದಿಲ್ಲಿಯಲ್ಲಿ ಚಿಕಿತ್ಸೆ ಪಡೆದ ನಂತರ ವೈದ್ಯನಿಗೆ ಗುಂಡಿಟ್ಟು ಹತ್ಯೆ!

ದಿಲ್ಲಿಯಲ್ಲಿ ಚಿಕಿತ್ಸೆ ಪಡೆದ ನಂತರ ವೈದ್ಯನಿಗೆ ಗುಂಡಿಟ್ಟು ಹತ್ಯೆ!

ಗಾಯಕ್ಕೆ ಬ್ಯಾಂಡೇಜ್ ಮಾಡಿಸಿಕೊಂಡ ನಂತರ ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನಿಗೆ ಗುಂಡಿಟ್ಟು ಕೊಂದ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕೋಲ್ಕತಾದ ಆರ್ ಜಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಈ ಘಟನೆ ನಡೆದಿರುವುದು ದೇಶವೇ ಬೆಚ್ಚಿಬಿದ್ದಿದೆ.

ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ಆಗಮಿಸಿದ ಇಬ್ಬರು ಅಪ್ರಾಪ್ತರು ಹೆಬ್ಬೆರಳಿಗೆ ಆಗಿರುವ ಗಾಯಕ್ಕೆ ಬ್ಯಾಂಡೇಜ್ ಹಾಕುವಂತೆ ಕೇಳಿದ್ದಾರೆ. ಚಿಕಿತ್ಸೆ ನಂತರ ಔಷಧ ಕೊಡುವಂತೆ ಕೇಳಿದ್ದಾರೆ. ನರ್ಸ್ ಮಾತ್ರೆ ತರುವಾಗ ಗುಂಡು ಹಾರಿಸಿದ ಶಬ್ದ ಕೇಳಿದ್ದು 55 ವರ್ಷದ ವೈದ್ಯ ಡಾ.ಜಾವೇದ್ ಅಖ್ತರ್ ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಬಂದಿದ್ದ ಇಬ್ಬರ ವಯಸ್ಸು 16ರಿಂದ 17 ವರ್ಷ ಎಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಅಪ್ರಾಪ್ತರು ವೈದ್ಯನನ್ನು ಕೊಲ್ಲುವ ಉದ್ದೇಶದಿಂದಲೇ ಆಸ್ಪತ್ರೆಗೆ ಬಂದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments