Thursday, September 19, 2024
Google search engine
Homeತಾಜಾ ಸುದ್ದಿಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು 37 ಮಂದಿ ದುರ್ಮರಣ!

ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು 37 ಮಂದಿ ದುರ್ಮರಣ!

ಉತ್ತರ ಪ್ರದೇಶದ ವಿವಿದೆಡೆ ಸಿಡಿಲು ಬಡಿದು ಒಂದೇ ದಿನ 37 ಮಂದಿ ಮೃತಪಟ್ಟ ಆಘಾತಕಾರಿ ಘಟನೆ ಸಂಭವಿಸಿದೆ.

ಉತ್ತರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿತದಿಂದ ರಾಜ್ಯ ನಾನಾ ಕಡೆ 37 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಪ್ರತಾಪ್ ಗಢವೊಂದರಲ್ಲೇ ಗರಿಷ್ಠ 11 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ.

ಸುಲ್ತಾನ್ ಪುರದಲ್ಲಿ 7, ಚಂಡೌಲಿಯಲ್ಲಿ 6, ಮಣಿಪುರಿಯಲ್ಲಿ 5 ಮತ್ತು ಪ್ರಯಾಗ್ ರಾಜ್ ನಲ್ಲಿ ನಾಲ್ವರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments