Thursday, September 19, 2024
Google search engine
Homeಅಪರಾಧಮಂಡ್ಯದಲ್ಲಿ ಪತ್ನಿ ಶವ ಮನೆಯಲ್ಲಿ, ಕೆರೆಯಲ್ಲಿ ಪತಿ ಶವ ಪತ್ತೆ: ಮನೆಗೆ ಬೆಂಕಿ!

ಮಂಡ್ಯದಲ್ಲಿ ಪತ್ನಿ ಶವ ಮನೆಯಲ್ಲಿ, ಕೆರೆಯಲ್ಲಿ ಪತಿ ಶವ ಪತ್ತೆ: ಮನೆಗೆ ಬೆಂಕಿ!

ಬಾಣಂತನ ಮುಗಿಸಿ 5 ದಿನಗಳ ಹಿಂದೆಯಷ್ಟೇ ಮರಳಿದ್ದ ಪತ್ನಿ ಶವ ಮನೆಯಲ್ಲಿ ಪತ್ತೆಯಾಗಿದ್ದರೆ, ಪತಿಯ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.

ನೇಣುಬಿಗಿದು ಪತ್ನಿ ಸ್ವಾತಿ ಮೃತಪಟ್ಟರೆ, ಪತಿ ಮೋಹನ್ ಶವ ಕೆರೆಯಲ್ಲಿ ಪತ್ತೆಯಾಗಿದೆ. ದಂಪತಿ ಸಾವಿನಿಂದ ಒಂದೂವರೆ ವರ್ಷದ ಮಗು ಅನಾಥವಾಗಿದೆ.

ಸ್ವಾತಿ ಸಾವಿನ ಸುದ್ದಿಯಿಂದ ಆಘಾತಗೊಂಡ ಕುಟುಂಬಸ್ಥರು ಮನೆ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಸಿದ್ದೂ ಅಲ್ಲದೇ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ.

ಮೋಹನ್ ಹಣದ ದಾಹದಿಂದ ದಂಪತಿ ನಡುವೆ ಪದೇಪದೆ ಜಗಳ ಉಂಟಾಗುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಸ್ವಾತಿ ತಂದೆ 3 ಲಕ್ಷ ರೂ. ಹಣವನ್ನು ಚೀಟಿ ತೆಗೆದುಕೊಟ್ಟಿದ್ದರು ಎನ್ನಲಾಗಿದೆ.

ಮೋಹನ್ ತಂದೆ ಶ್ರೀಮಂತರಾಗಿದ್ದು, ಮಗನಿಗೆ ಕೇಳಿದಾಗಲೆಲ್ಲಾ ಹಣ ನೀಡಿ ಅಭ್ಯಾಸ ಮಾಡಿದ್ದರಿಂದ ಕೆಟ್ಟ ಚಟಗಳ ದಾಸನಾಗಿದ್ದ. ಈ ವಿಷಯವನ್ನು ಪತ್ನಿ ಸ್ವಾತಿ ಬಳಿಯೂ ಹೇಳಿಕೊಂಡಿದ್ದ. ಅಲ್ಲದೇ ಕ್ರಿಕೆಟ್ ಬೆಟ್ಟಿಂಗ್ ಮತ್ತು ಆನ್ ಗೈಮ್ ದಾಸನಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ.

ಹಣ ಕಳೆದುಕೊಂಡಾಗಲೆಲ್ಲಾ ಪತ್ನಿ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದು, ಆಕೆಯ ಚಿನ್ನಾಭರಣಗಳನ್ನು ಕೂಡ ಒತ್ತೆ ಇಟ್ಟಿದ್ದ. ಪತಿಯ ಹಣದ ದಾಹ ತಡೆಯದೇ ಸ್ವಾತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಸಾವಿನಿಂದ ಹೆದರಿದ ಮೋಹನ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments