Sunday, June 14, 2026
Google search engine
Homeರಾಜ್ಯಡಿಕೆ ಶಿವಕುಮಾರ್‌ ಸಂಕಲ್ಪ ಮಾಡಿದ್ದಾರೆ, ಸಿಎಂ ಆಗ್ತಾರೆ: ಅರ್ಚಕ ಭವಿಷ್ಯ

ಡಿಕೆ ಶಿವಕುಮಾರ್‌ ಸಂಕಲ್ಪ ಮಾಡಿದ್ದಾರೆ, ಸಿಎಂ ಆಗ್ತಾರೆ: ಅರ್ಚಕ ಭವಿಷ್ಯ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಂತ್ರಾಲಯದ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸಿಎಂ ಆಗಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪ ನಿಜವಾಗಲಿದ್ದು, ಸಿಎಂ ಆಗೇ ಆಗ್ತಾರೆ ಎಂದು ಅರ್ಚಕ ಭವಿಷ್ಯ ನುಡಿದಿದ್ದಾರೆ.

ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಆರಂಭದಲ್ಲಿ ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ಬಳಿಕ ಮೂಲ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ: ಇದಾದ ಬಳಿಕ ಪಂಚಮುಖಿ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಿಎಂ ಆಗಬೇಕು ಎಂದು ಸಂಕಲ್ಪ ಮಾಡಿದರು.

ನಂತರ ದೇವಸ್ಥಾನದ ಅರ್ಚಕರು ಈ ವಿಷಯ ಮಾಧ್ಯಮಗಳಿಗೆ ತಿಳಿಸಿದ್ದು, ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂದು ಸಂಕಲ್ಪ ಮಾಡಿಸಿದ್ದಾರೆ. ಇಲ್ಲಿ ಸಂಕಲ್ಪ ಮಾಡಿದರೆ ಇಷ್ಟಾರ್ಥ ನೇರವೇರಲಿದೆ. ಅವರು ಸಿಎಂ ಆಗಿಯೇ ಆಗುತ್ತಾರೆ ಎಂದರು.

ಪಂಚಮುಖಿ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಡಿಸಿಎಂ, ರಾಮನ ತಂದೆ ದಶರಥ ಮಹಾರಾಜರ ದೇವಸ್ಥಾನ ಎಲ್ಲೂ ಇಲ್ಲ. ಆದರೆ, ರಾಮನ ಭಂಟ ಆಂಜಿನೇಯ ಸ್ವಾಮಿ ದೇವಸ್ಥಾನಗಳು ಎಲ್ಲ ಕಡೆ ಇವೆ. ಆಂಜಿನೇಯ ಸ್ವಾಮಿ ದೊಡ್ಡ ಸಮಾಜ ಸೇವಕ. ಇಂತಹ ಸಮಾಜ ಸೇವಕನಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ದೇವಸ್ಥಾನದಲ್ಲಿನ ವ್ಯವಹಾರ ಭಕ್ತಿನಿಗೂ ಭಗವಂತನಿಗೂ ಬಿಟ್ಟದ್ದು. ಇದನ್ನು ಮಾಧ್ಯಮದವರ ಮುಂದೆ ಸಾರ್ವತ್ರಿಕಗೊಳಿಸಲಾಗುವುದಿಲ್ಲ. ನಾನುಂಟು ಆಂಜಿನೇಯ ಸ್ವಾಮಿ ಉಂಟು ಎಂದು ಮಾರ್ಮಿಕವಾಗಿ ನುಡಿದರು.

ಇದಕ್ಕೂ ಮುನ್ನ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನಂತರ ಶ್ರೀಗಳು ಶ್ರೀಮಠದ ಪರಂಪರೆ ಹಾಗೂ ಈಗಿನ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಶ್ರೀಗಳು ಡಿ.ಕೆ‌.ಶಿವಕುಮಾರ ಹಾಗೂ ಅವರ ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆ ವೇಳೆ ಮಂತ್ರಾಲಯಕ್ಕೆ ಆಗಮಿಸಿದ್ದೆ. ಅಂದು ಸಂಕಲ್ಪ ಮಾಡಿದ್ದೆ, ಆ ಬಳಿಕ ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿದೆ. ಮತ್ತೊಮ್ಮೆ ಮಂತ್ರಾಲಯಕ್ಕೆ ಬರುವಂತೆ ಆಹ್ವಾನಿಸಲಾಯಿತು.

ಇದೀಗ ಮತ್ತೊಮ್ಮೆ ಗುರುರಾಯರ ಸನ್ನಿದ್ದಿಗೆ ಕುಟುಂಬ ಸಮೇತವಾಗಿ ಬಂದಿರುವೆ. ಎಲ್ಲದಕ್ಕೂ ಗುರುಗಳ ಆರ್ಶಿವಾದ ಬೇಕು. ಹೀಗಾಗಿ ರಾಯರ ದರ್ಶನಕ್ಕೆ ಬಂದಿರುವೆ. ದೀಪಾವಳಿ ಪಾಡ್ಯ ಆಗಿರುವ ಈ ದಿನ ವಿಶೇಷವಾದದ್ದು, ಇದಕ್ಕಾಗಿ ಪೂಜೆಯಲ್ಲಿ ಭಾಗವಹಿಸುವೆ. ಅಷ್ಟೇ ಅಲ್ಲ ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಯರ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಎಲ್ಲರಿಗೂ ಹಾಗೂ ನಾಡಿಗೂ ಒಳ್ಳೆಯದಾಗಲಿ ಅಂತ ಬೇಡಿಕೊಂಡಿರುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments