Kannadavahini

ಬಾರಿಸು ಕನ್ನಡ ಡಿಂಡಿಮವ

ತಾಜಾ ಸುದ್ದಿ ದೇಶ

ಉತ್ತರಾಖಂಡ್ ನಲ್ಲಿ ನದಿಗೆ ಬಿದ್ದ ಮಿನಿ ಬಸ್: ಮೃತರ ಸಂಖ್ಯೆ 14ಕ್ಕೆ ಏರಿಕೆ

23 ಯಾತ್ರಿಗಳಿದ್ದ ಮಿನಿ ಬಸ್ ಪ್ರಪಾತಕ್ಕೆ ಉರುಳಿ ನದಿಗೆ ಬಿದ್ದ ಪರಿಣಾಮ 14 ಮಂದಿ ಮೃತಪಟ್ಟ ದಾರುಣ ಘಟನೆ ಉತ್ತರಾಖಂಡ್ ನಲ್ಲಿ ಸಂಭವಿಸಿದೆ.

ರಿಷಿಕೇಶ್-ಬದರಿನಾಥ್ ಹೆದ್ದಾರಿಯಲ್ಲಿ ರುದ್ರಪ್ರಯಾಗ್ ಜಿಲ್ಲೆಯ ರೈಟೊಲಿ ಗ್ರಾಮದ ಸಮೀಪ ರಸ್ತೆಯಿಂದ ಪ್ರಪಾತಕ್ಕೆ ಬಿದ್ದು ನದಿಗೆ ಉರುಳಿ ದುರ್ಘಟನೆ ಸಂಭವಿಸಿದೆ.

ಆಲ್ಕಾನಂದ ನದಿಯಿಂದ ಟೆಂಪೊ ಟ್ರಾವೆಲರ್ ವಾಹನವನ್ನು ಮೇಲಕ್ಕೇತ್ತಲಾಗಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಹಲವರಿಗೆ ಗಾಯಗಳಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆದಿದೆ.

ದುರ್ಘಟನೆಗೆ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಮನಿ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

LEAVE A RESPONSE

Your email address will not be published. Required fields are marked *