Sunday, October 27, 2024
Google search engine
Homeತಾಜಾ ಸುದ್ದಿಮುಂಬೈ ರೈಲು ನಿಲ್ದಾಣದಲ್ಲಿ ಕಲ್ತುಳಿತದಲ್ಲಿ 9 ಮಂದಿಗೆ ಗಾಯ

ಮುಂಬೈ ರೈಲು ನಿಲ್ದಾಣದಲ್ಲಿ ಕಲ್ತುಳಿತದಲ್ಲಿ 9 ಮಂದಿಗೆ ಗಾಯ

ದೀಪಾವಳಿ ಪ್ರಯುಕ್ತ ಜನರು ತವರಿಗೆ ಮರಳುವ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಉಂಟಾದ ನೂಕುನುಗ್ಗಾಟದಲ್ಲಿ 9 ಮಂದಿ ಗಾಯಗೊಂಡ ಘಟನೆ ಮುಂಬೈನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.

ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟ್ಟಿದ್ದ ರೈಲಿನ ಬಳಿ ಪ್ರಯಾಣಿಕರು ನೂಕುನುಗ್ಗಲಿನಲ್ಲಿ ಈ ಅವಘಢ ಸಂಭವಿಸಿದೆ.

ದೀಪಾವಳಿಗೆ ತವರಿಗೆ ಮರಳಲು ಜನರು ತಳ್ಳಾಟ ನಡೆಸಿದ್ದರಿಂದ ನೂಕುನುಗ್ಗಲಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 9 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ ಸಂಖ್ಯೆ 22921 ಮುಂಬೈನ ಬಾಂದ್ರಾದಿಂದ ಗೋರಖ್ ಪುರಕ್ಕೆ ರೈಲು ಹೊರಟ್ಟಿತ್ತು. ವಾರಕ್ಕೊಮ್ಮೆ ಹೊರಡುವ ರೈಲು ಭಾನುವಾರ ಮುಂಜಾನೆ 5.10ಕ್ಕೆ ಹೊರಡಬೇಕಿತ್ತು. ಸುಮಾರು 3 ಗಂಟೆಗೆ ಜನರು ಒಂದೇ ಬಾರಿ ನಿಲ್ದಾಣಕ್ಕೆ ನುಗ್ಗಿದ್ದರಿಂದ ಈ ಅವಘಢ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments