Friday, May 17, 2024
Google search engine
Homeಅಪರಾಧಸಿಗರೇಟು ಸೇದುತ್ತಿದ್ದ ಮಹಿಳೆಯರನ್ನು ದಿಟ್ಟಿಸಿ ನೋಡಿದ್ದಕ್ಕೆ ವ್ಯಕ್ತಿಯ ಹತ್ಯೆ

ಸಿಗರೇಟು ಸೇದುತ್ತಿದ್ದ ಮಹಿಳೆಯರನ್ನು ದಿಟ್ಟಿಸಿ ನೋಡಿದ್ದಕ್ಕೆ ವ್ಯಕ್ತಿಯ ಹತ್ಯೆ

ಪಾನ್ ಶಾಪ್ ಅಂಗಡಿ ಮುಂದೆ ಸಿಗರೇಟು ಸೇದುತ್ತಿದ್ದ ಇಬ್ಬರು ಮಹಿಳೆಯರನ್ನು ದಿಟ್ಟಿಸಿ ನೋಡಿದ್ದಕ್ಕೆ 28 ವರ್ಷದ ಯುವಕ ಹತ್ಯೆಯಾದ ಭೀಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನಾಗ್ಪುರದ ಮಹಾಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದ್ದು, ಜಯಶ್ರೀ ಪಂಜಾಡೆ ಮತ್ತು ಸ್ನೇಹಿತೆ ಸರಿತಾ ಸೈರೆ ಪಾನ್ ಅಂಗಡಿ ಮುಂದೆ ಸಿಗರೇಟು ಸೇದುತ್ತಿದ್ದರು.

ಇದೇ ವೇಳೆ ಸಿಗರೇಟ್ ತೆಗೆದುಕೊಳ್ಳಲು ಅಂಗಡಿಗೆ ಬಂದ ರಂಜತ್ ರಾಥೋಡ್ ಇಬ್ಬರು ಮಹಿಳೆಯರು ಸಿಗರೇಟು ಸೇದುತ್ತಿರುವುದನ್ನು ನೋಡಿ ಅಚ್ಚರಿಯಿಂದ ಅವರನ್ನೇ ದಿಟ್ಟಿಸಿ ನೋಡುತ್ತಿದ್ದ.

ತಮ್ಮನ್ನು ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸಿದ ಮಹಿಳೆಯರು ರಂಜಿತ್ ನನ್ನು ಪ್ರಶ್ನಿಸಿದರು. ಇಬ್ಬರು ನಡುವೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿತು. ಮಹಿಳೆಯರು ನಿಂದಿಸುವುದನ್ನು ರಂಜಿತ್ ವೀಡಿಯೋ ಚಿತ್ರೀಕರಿಸತೊಡಗಿದ.

ಮಹಿಳೆಯರು ಕೂಡಲೇ ಸ್ನೇಹಿತನಿಗೆ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದರು. ಸ್ಥಳಕ್ಕೆ ಆಗಮಿಸಿದ ಆಕಾಶ್ ರೌತ್ ರಂಜಿತ್ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೇ ಚಾಕುವಿನಿಂದ ಪದೇಪದೆ ಇರಿದ. ಇದರಿಂದ ತೀವ್ರ ಅಸ್ವಸ್ಥನಾದ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಂಗಡಿ ಮಾಲೀಕ ಲಕ್ಷ್ಮಣ್ ತಾವಡೆ ಪ್ರತ್ಯಕ್ಷದರ್ಶಿ ಆಗಿದ್ದು, ಮಹಿಳೆ ಕರೆ ಮಾಡಿ ಸ್ನೇಹಿತನನ್ನು ಕರೆ ಮಾಡುತ್ತಿದ್ದಂತೆ ಅಂಗಡಿ ಬಾಗಿಲು ಹಾಕಿ ಹೋಗಿದ್ದಾಗಿ ಹೇಳಿದ್ದಾನೆ. ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments