Friday, October 4, 2024
Google search engine
Homeತಾಜಾ ಸುದ್ದಿಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಗಗನಸಖಿ ಕೇರಳದಲ್ಲಿ ಅರೆಸ್ಟ್!

ಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಗಗನಸಖಿ ಕೇರಳದಲ್ಲಿ ಅರೆಸ್ಟ್!

ಗುದನಾಳದಲ್ಲಿ 1 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮೂಲಕ ಸಾಗಿಸುತ್ತಿದ್ದ ಕೋಲ್ಕತಾ ಮೂಲದ ಗಗನಸಖಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕೋಲ್ಕತಾ ಮೂಲದ ಸುರಭಿ ಕೌತಮ್ ಎಂಬ ಗಗನಸಖಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ನೀಡಿದ ಸುಳಿವಿನ ಮೇರೆಗೆ ಈಕೆಯನ್ನು ಬಂಧಿಸಲಾಗಿದೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುರಭಿ ತನ್ನ ಗುದನಾಳದಲ್ಲಿ 960 ಗ್ರಾಂ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದಳು. ಕಣ್ಣೂರ್ ಮಾರ್ಗವಾಗಿ ಮಸ್ಕತ್ ಗೆ ಮೇ 28ರಂದು ವಿಮಾನ ತೆರಳುವ ಮುನ್ನ ಕಣ್ಣೂರಿನಲ್ಲಿ ಗಗನಸಖಿಯನ್ನು ಬಂಧಿಸಲಾಗಿದೆ.

ಗಗನಸಖಿ ಇದೇ ರೀತಿ ಹಲವಾರು ಬಾರಿ ಚಿನ್ನ ಕಳ್ಳಸಾಗಾಣೆ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments