Saturday, June 29, 2024
Google search engine
Homeಅಪರಾಧತಪ್ಪು ವರದಿ ನೀಡಲು ವೈದ್ಯರಿಗೆ 1 ಕೋಟಿ ಆಮೀಷ ಒಡ್ಡಿದ್ದ ದರ್ಶನ್ ಗ್ಯಾಂಗ್!

ತಪ್ಪು ವರದಿ ನೀಡಲು ವೈದ್ಯರಿಗೆ 1 ಕೋಟಿ ಆಮೀಷ ಒಡ್ಡಿದ್ದ ದರ್ಶನ್ ಗ್ಯಾಂಗ್!

ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಪ್ರಕರಣ ಮುಚ್ಚಿ ಹಾಕಲು ವೈದ್ಯರಿಗೆ ನಟ ದರ್ಶನ್ ಗ್ಯಾಂಗ್ 1 ಕೋಟಿ ರೂ. ಆಮೀಷ ಒಡ್ಡಿರುವ ಮತ್ತೊಂದು ಆಘಾತಕಾರಿ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಮತ್ತು ಅನ್ನಪೂರ್ಣೇಶ್ವರಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಶವ ಸಾಗಾಟಕ್ಕೆ ಬಳಸಿದ್ದ ಮಹೇಂದ್ರ ಬೊಲೆರೊ ಜೀಪನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ರೇಣುಕಾಸ್ವಾಮಿ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿದ್ದಾರೆಯೇ ಹೊರತು ಹಲ್ಲೆಯಿಂದ ಅಲ್ಲ ಎಂದು ತಪ್ಪು ವರದಿ ನೀಡುವಂತೆ ವೈದ್ಯರಿಗೆ 1 ಕೋಟಿ ರೂ. ಆಮೀಷ ಒಡ್ಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ತನಿಖೆ ಮುಂದುವರಿಸುತ್ತಿರುವ ಪೊಲೀಸರು ಮತ್ತಷ್ಟು ಆಘಾತಕಾರಿ ವಿಷಯಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಅಲ್ಲದೇ ತಲೆಮರೆಸಿಕೊಂಡಿದ್ದ 4 ಆರೋಪಿಗಳ ಪೈಕಿ ಮತ್ತೊಬ್ಬನನ್ನು ಬಂಧಿಸಿದ್ಧಾರೆ. ಇದರಿಂದ ಬಂಧಿತರ ಸಂಖ್ಯೆ 14ಕ್ಕೇರಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments