Monday, September 16, 2024
Google search engine
Homeತಾಜಾ ಸುದ್ದಿಸಿದ್ದರಾಮಯ್ಯ ಕಾಲ್ಗುಣ ಸರಿಯಿಲ್ಲ ಅಂದವರಿಗೆ ದೇವರೇ ಉತ್ತರ ಕೊಟ್ಟಿದ್ದಾನೆ: ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಕಾಲ್ಗುಣ ಸರಿಯಿಲ್ಲ ಅಂದವರಿಗೆ ದೇವರೇ ಉತ್ತರ ಕೊಟ್ಟಿದ್ದಾನೆ: ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಮಳೆ ಆಗುತ್ತಿಲ್ಲ ಎಂದು ಟೀಕೆ ಮಾಡುತ್ತಿದ್ದ ಪ್ರತಿಪಕ್ಷಗಳಿಗೆ ದೇವರೇ ಉತ್ತರ ಕೊಟ್ಟಿದ್ದಾನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮಂಡ್ಯದ ಕೆಆರ್ ಎಸ್ ಡ್ಯಾಂ ನಂತರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಲ್ಗುಣ ಸರಿಯಿಲ್ಲ ಅಂತ ಬಿಜೆಪಿಯವರು ರಾಜಕೀಯ ಮಾಡಿದರು. ಮೋಡಗಳು ರಾಜಕೀಯ ಮಾಡುತ್ತಾವಾ? ದೇವರ ಕೃಪೆಯಿಂದ ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗಿದೆ ಎಂದರು.

ತಮಿಳುನಾಡಿಗೆ ಇದುವರೆಗೆ 46 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾರಿ ಅದಕ್ಕಿಂತ ಹೆಚ್ಚು ನೀರು ಹರಿದಿದೆ. ಈಗ ರೈತರ ಕೆರೆಗಳನ್ನು ತುಂಬಿಸುವ ನೀರು ಬಿಡಲಾಗುವುದು ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments