Home ಆರೋಗ್ಯ ಊಟದ ಮೊದಲು, ನಂತರ ಟೀ-ಕಾಫಿ ಸೇವಿಸಬೇಡಿ: ಭಾರತೀಯ ಮೆಡಿಕಲ್ ಕೌನ್ಸಿಲ್ ಮಾರ್ಗಸೂಚಿ ಬಿಡುಗಡೆ

ಊಟದ ಮೊದಲು, ನಂತರ ಟೀ-ಕಾಫಿ ಸೇವಿಸಬೇಡಿ: ಭಾರತೀಯ ಮೆಡಿಕಲ್ ಕೌನ್ಸಿಲ್ ಮಾರ್ಗಸೂಚಿ ಬಿಡುಗಡೆ

by Editor
0 comments

ಆರೋಗ್ಯಕಾರಿ ಜೀವನಕ್ಕಾಗಿ ಭಾರತೀಯ ಮೆಡಿಕಲ್ ಕೌನ್ಸಿಲ್ ಅಂಡ್ ರಿಸರ್ಚ್ (ICMR) 17 ಆಹಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಭಾರತೀಯ ಮೆಡಿಕಲ್ ಕೌನ್ಸಿಲ್ ಅಂಡ್ ರಿಚರ್ಚ್ ನೀಡಿದ ಮಾರ್ಗಸೂಚಿಯಲ್ಲಿ ಊಟ ಮೊದಲು ಅಥವಾ ನಂತರ ಚಹಾ ಅಥವಾ ಕಾಫಿ ಸೇವಿಸುವುದು ಆರೋಗ್ಯಕಾರಿ ಅಲ್ಲ. ಈ ಅಭ್ಯಾಸ ತೊರೆಯುವಂತೆ ಸೂಚಿಸಿದೆ.

ಭಾರತೀಯರು ಸಾಮಾನ್ಯವಾಗಿ ಬಿಸಿ ಪಾನೀಯವಾಗಿ ಹೆಚ್ಚಾಗಿ ಟೀ ಮತ್ತು ಕಾಫಿಯನ್ನು ಸೇವಿಸುತ್ತಾರೆ. ಆದರೆ ಊಟದ ಮೊದಲು ಅಥವಾ ನಂತರ ಸೇವನೆ ಅಭ್ಯಾಸ ಅನಾರೋಗ್ಯಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ಐಸಿಎಂಆರ್ ವಿವರಿಸಿದೆ.

ಕಾಫಿ ಮತ್ತು ಟೀಯಲ್ಲಿ ಕೆಫೆನ್ ಅಂಶ ಇದ್ದು, ಇದು ದೇಹದ ನರ ಮಂಡಲಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪಾರ್ಶ್ವವಾಯು ಮುಂತಾದ ನರ ದೌರ್ಬಲ್ಯದಂತಹ ಸಮಸ್ಯೆಗಳು ಕಾಡಬಹುದು ಎಂದು ಎಚ್ಚರಿಸಿದೆ. ಆದರೆ ಕಾಫಿ ಮತ್ತು ಟೀ ಸೇವಿಸಲೇಬಾರದು ಎಂದು ಹೇಳಿಲ್ಲ.

banner

ಒಂದು ಕಪ್ (150ml) ಕುದಿಸಿದ ಕಾಫಿಯು 80-120mg ಕೆಫೀನ್ ಅನ್ನು ಹೊಂದಿರುತ್ತದೆ, ತ್ವರಿತ ಕಾಫಿ 50-65mg ಅನ್ನು ಹೊಂದಿರುತ್ತದೆ ಮತ್ತು ಚಹಾವು 30-65mg ಕೆಫೀನ್ ಅನ್ನು ಹೊಂದಿರುತ್ತದೆ.

“ಚಹಾ ಮತ್ತು ಕಾಫಿ ಸೇವನೆಯಲ್ಲಿ ಮಿತವಾಗಿರುವಂತೆ ಸಲಹೆ ನೀಡಲಾಗುತ್ತದೆ, ಆದ್ದರಿಂದ ಕೆಫೀನ್ ಸೇವನೆಯು ಸಹಿಸಬಹುದಾದ ಮಿತಿಗಳನ್ನು (300mg/day) ಮೀರುವುದಿಲ್ಲ, ಒಬ್ಬ ವ್ಯಕ್ತಿಯು ಹೊಂದಬಹುದಾದ ಕೆಫೀನ್‌ನ ದೈನಂದಿನ ಮಿತಿ ಹೊಂದಿರುತ್ತಾರೆ ಎಂದು ವರದಿ ತಿಳಿಸಿದೆ.

ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಕಾಫಿ ಮತ್ತು ಚಹಾವನ್ನು ಸೇವಿಸುವ ಅಭ್ಯಾಸ ತೊರೆಯುವಂತೆ ವರದಿ ಸಲಹೆ ನೀಡಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ ಇಸ್ರೇಲ್-ಹಮಾಸ್ ಕದನ ವಿರಾಮ ಸಾಧ್ಯತೆ: ಮಧ್ಯಪ್ರಾಚ್ಯದಲ್ಲಿ ಶಾಂತಿ ವಾಪಸ್ 3ನೇ ತಲೆಮಾರಿನ ನಾಗ್ ಕ್ಷಿಪಣಿ ಮೊದಲ ಪ್ರಯೋಗ ಯಶಸ್ವಿ! ಖೋಖೋ ವಿಶ್ವಕಪ್: ಬ್ರೆಜಿಲ್ ಮಣಿಸಿದ ಭಾರತ ಪುರುಷರ ತಂಡ ನಾಕೌಟ್ ಸನಿಹ ಖೋ-ಖೋ ವಿಶ್ವಕಪ್‌ 2025: ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ ರಣಜಿ ಟ್ರೋಫಿ ದೆಹಲಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ! ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿ ಪ್ರಕಟ! ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ, ಕಣ್ತುಂಬಿಕೊಂಡ ಅಯ್ಯಪ್ಪ ಭಕ್ತರು ದಲಿತ ಅಥ್ಲೀಟ್ ಮೇಲೆ 65 ಜನರಿಂದ ಅತ್ಯಾಚಾರ: 44 ಮಂದಿ ಬಂಧನ ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಆಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ