Home ಕ್ರೀಡೆ IPL: ಜಾಕ್ ಫ್ರೇಸರ್ ಆಟಕ್ಕೆ ಸೋತ ಮುಂಬೈ, ಡೆಲ್ಲಿ ಗೆ 10 ರನ್ ರೋಚಕ ಜಯ

IPL: ಜಾಕ್ ಫ್ರೇಸರ್ ಆಟಕ್ಕೆ ಸೋತ ಮುಂಬೈ, ಡೆಲ್ಲಿ ಗೆ 10 ರನ್ ರೋಚಕ ಜಯ

by Editor
0 comments

ಆರಂಭಿಕ ಜಾಕ್ ಫ್ರೇಸರ್ ಮ್ಯಾಕ್ ಗುರ್ಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾಗಿದೆ.

ದೆಹಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 257 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಕಳೆದುಕೊಂಡು 247 ರನ್ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಪರ ತಿಲಕ್ ವರ್ಮಾ 32 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ಸೇರಿದ 63 ರನ್ ಸಿಡಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 46 ರನ್ ಬಾರಿಸಿದರು. ಟಿಮ್ ಹೆಡ್ 17 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಜಾಕ್ ಫ್ರೇಸರ್ ಗುರ್ಕ್ 27 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 86 ರನ್ ಚಚ್ಚಿದರು. ಅಲ್ಲದೇ ಮೊದಲ ವಿಕೆಟ್ ಗೆ ಅಭಿಷೇಕ್ ಪೊರೆಲ್ (36) ಜೊತೆ 7.3 ಓವರ್ ಗಳಲ್ಲಿ 114 ರನ್ ಜೊತೆಯಾಟದಿಂದ ತಂಡಕ್ಕೆ ಮಿಂಚಿನ ಆರಂಭ ನೀಡಿದರು.

banner

ನಂತರ ಶಾಯಿ ಹೋಪ್ (41), ನಾಯಕ ರಿಷಭ್ ಪಂತ್ (29) ಮತ್ತು ಟ್ರಿಸ್ಟನ್ ಸ್ಟಬ್ಸ್ 25 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 48 ರನ್ ಚಚ್ಚಿ ತಂಡದ ಮೊತ್ತ 250ರ ಗಡಿ ದಾಟಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ ಫಿನಾಲೆ ಹೊಸ್ತಿಲಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್! ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ? ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಪ್ರತಿಭಟನೆ ಬಿಸಿ: ಬೀದಿಗಿಳಿದ ಸಾವಿರಾರು ಅಮೆರಿಕನ್ನರು ಫೆ.14ರಂದು ರೈತರ ಬೇಡಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ: ವೈದ್ಯ ನೆರವು ಪಡೆಯಲು ಜಗಜೀತ್ ಒಪ್ಪಿಗೆ ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿರಿಸಿದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ: ಮೊದಲ ಫೋಟೊ ಬಿಡುಗಡೆ ಕೇಂದ್ರ ಆದಿವಾಸಿ ಜನಜಾತಿ ನ್ಯಾಯ ಅಭಿಯಾನಕ್ಕೆ ಮಂಡ್ಯದ ಪೂವನಹಳ್ಳಿ ಆಯ್ಕೆ: ಎಚ್.ಡಿ. ಕುಮಾರಸ್ವಾಮಿ ಘೋಷಣೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅಜ್ಜಿ, ಚಿಕ್ಕಪ್ಪ ಅಪಘಾತದಲ್ಲಿ ದುರ್ಮರಣ ಮಹಾಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ: ಹಲವು ಶಿಬಿರಗಳಿಗೆ ವ್ಯಾಪಿ ಬಿಜೆಪಿ ಬಣ ಕಿತ್ತಾಟಕ್ಕೆ ಟ್ವಿಸ್ಟ್: ಪ್ರಧಾನ ಕಾರ್ಯದರ್ಶಿ ಸ್ಥಾನ ಒಲ್ಲೆ ಅಂದ ಶಾಸಕ ಸುನೀಲ್ ಕುಮಾರ್!