Saturday, September 28, 2024
Google search engine
Homeತಾಜಾ ಸುದ್ದಿಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ: ನೋಟಿಸ್ ಜಾರಿ!

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ: ನೋಟಿಸ್ ಜಾರಿ!

ಬಿಬಿಪಿಎಂಯಲ್ಲಿ ಪ್ರತಿಯೊಂದು ಕಡತ ಮುಂದಿನ ಟೇಬಲ್ ಗೆ ಹೋಗಬೇಕು ಅಂದರೆ ಕೈ ಬಿಸಿ ಮಾಡಲೇಬೇಕು. ಇಲ್ಲದಿದ್ದರೆ ಅಲೆದು ಅಲೆದು ಚಪ್ಪಲಿ ಸವೆಯುತ್ತವೆ ಹೊರತು ಕೆಲಸ ಮಾತ್ರ ಆಗುವುದಿಲ್ಲ ಎಂಬ ದೂರುಗಳಿಗೆ ಸಾಕ್ಷಿ ಲಭಿಸಿದ್ದು, ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ ಸಿಕ್ಕಿಬಿದ್ದಿದ್ದಾನೆ.

ಮಹಾದೇವಪುರ ಬಿಬಿಎಂಪಿ ಕಚೇರಿ ಕಂದಾಯ ಅಧಿಕಾರಿ ಬಸವರಾಜ್ ಮಗ್ಗಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಇತ್ತೀಚೆಗಷ್ಟೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರೂ ಬುದ್ದಿ ಕಲಿಯದ ಬಸವರಾಜ ಮಗ್ಗಿ ತಮ್ಮ ಲಂಚ ಪಡೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ಇದೀಗ ಮಾಧ್ಯಮಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಕಂದಾಯ ಅಧಿಕಾರಿ ಬಸವರಾಜ ಮಗ್ಗಿ ಮನೆಯಲ್ಲಿ ಅಪಾರ ಪ್ರಮಾಣ ಆಸ್ತಿ ಪತ್ತೆಯಾಗಿತ್ತು. ಅಲ್ಲದೇ ಕ್ಯಾಸಿನೋ ಕಾಯಿಲ್, ಹುಲಿ ಉಗುರು ಸಹ ಪತ್ತೆಯಾಗಿದ್ದು, ಭ್ರಷ್ಟಾಚಾರದ ಪರಮಾವಧಿ ಕಂಡು ಜನರು ಬೆಚ್ಚಿಬಿದ್ದಿದ್ದರು. ಲೋಕಾಯುಕ್ತ ದಾಳಿ ನಂತರವೂ ಬುದ್ದಿ ಕಲಿಯದ ಬಸವರಾಜ ಮಗ್ಗಿ ಮತ್ತೆ ಲಂಚದ ಬೆನ್ನುಬಿದ್ದಿದ್ದಾರೆ ಅಂದರೆ ಈತ ದೌಲತ್ತು ಎಷ್ಟಿರಬೇಕು ಎಂದು ಊಹಿಸಬಹುದು.

ಬಸವರಾಜ ಮಗ್ಗಿ ಕಡತ ವಿಲೇವಾರಿ ಮಾಡಲು ಲಂಚ ಪಡೆಯುವಾಗ ಮಾಧ್ಯಮದ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವೀಡಿಯೋ ಬಿಬಿಎಂಪಿ ವಲಯ ಆಯುಕ್ತ ರಮೇಶ್ ಗೆ ಸಾಕ್ಷಿ ಸಮೇತ ದೂರು ಸಲ್ಲಿಸಲಾಗಿದ್ದು, ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments