Home ತಾಜಾ ಸುದ್ದಿ ಜೈ ಶ್ರೀರಾಮ್, ಕೊಹ್ಲಿ, ರೋಹಿತ್ ಎಂದು ಉತ್ತರ ಬರೆದ ವಿದ್ಯಾರ್ಥಿಗಳು ಪಾಸ್! ಯುಪಿ ವಿವಿಯಲ್ಲಿ ಗೋಲ್ ಮಾಲ್!

ಜೈ ಶ್ರೀರಾಮ್, ಕೊಹ್ಲಿ, ರೋಹಿತ್ ಎಂದು ಉತ್ತರ ಬರೆದ ವಿದ್ಯಾರ್ಥಿಗಳು ಪಾಸ್! ಯುಪಿ ವಿವಿಯಲ್ಲಿ ಗೋಲ್ ಮಾಲ್!

by Editor
0 comments

ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಪಾಸ್ ಕರೊ (ಜೈ ಶ್ರೀರಾಮ್ ಪಾಸ್ ಮಾಡಿ) ಎಂದು ಬರೆದಿದ್ದ ವಿದ್ಯಾರ್ಥಿಯನ್ನು ಪಾಸ್ ಮಾಡಿದ ಪ್ರೊಫೆಸರ್ ಅನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಮತ್ತು ಕ್ರಿಕೆಟಿಗರ ಹೆಸರು ಬರೆದಿದ್ದರೂ ಪಾಸ್ ಮಾಡಲಾಗಿತ್ತು. ತಪಾಸಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಪ್ರೊಫೆಸರ್ ಗಳನ್ನು ಅಮಾನತು ಮಾಡಲಾಗಿದೆ.

ಜನ್ ಪುರ್ ನಲ್ಲಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ವೀರ್ ಬಹದ್ದೂರ್ ಸಿಂಗ್ ಅಮಾನತುಗೊಂಡ ಪ್ರೊಫೆಸರ್. ಈತ ವಿದ್ಯಾರ್ಥಿಗಳು ಪ್ರಶ್ನೆಗೆ ಸರಿಯಾಗಿ ಉತ್ತರ ಬರೆಯುವ ಬದಲು ಜೈ ಶ್ರೀರಾಮ್, ಕ್ರಿಕೆಟಿಗರ ಹೆಸರು, ಹಾಡು, ಸಂಗೀತ ಸೇರಿದಂತೆ ಬಾಯಿಗೆ ಬಂದದ್ದು ಬರೆದಿದ್ದರೂ ಅವರ ಬಳಿ ಹಣ ಪಡೆದು ಪಾಸ್ ಮಾಡಿಸುತ್ತಿದ್ದ.

ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ದಿವ್ಯಾಂಶು ಸಿಂಗ್, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರು ಸೇರಿದಂತೆ ವಿವಿಧ ಉನ್ನತ ಮಟ್ಟದ ನಾಯಕರಿಗೆ ಪತ್ರೆ ಬರೆದು ಪರೀಕ್ಷೆಯಲ್ಲಿ ಶೂನ್ಯ ಅಂಕ ತೆಗೆದವರು ಕೂಡ ಶೇ.60ಕ್ಕೂ ಅಧಿಕ ಅಂಕಗಳಿಂದ ಪಾಸಾಗುತ್ತಿದ್ದಾರೆ. ಇದರ ಹಿಂದೆ ವಿಶ್ವವಿದ್ಯಾಲಯದ ಅಧಿಕಾರಿಗಳ ಕೈವಾಡ ಕಾರಣ ಎಂದು ಆರೋಪಿಸಿದ್ದರು.

banner

ಆರ್ ಟಿಐ ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪತ್ರಿಕೆಗಳ ತನಿಖೆ ವೇಳೆ ಪ್ರೊಫೆಸರ್ ಗಳು ದಡ್ಡ ವಿದ್ಯಾರ್ಥಿಗಳಿಗೂ ಶೆ.60ಕ್ಕಿಂತ ಅಧಿಕ ಅಂಕ ನೀಡಿ ಪಾಸ್ ಮಾಡಿದ್ದು ತಿಳಿದು ಬಂದಿದ್ದು ಅಮಾನತು ಮಾಡಲಾಗಿದೆ.

ಒಬ್ಬ ವಿದ್ಯಾರ್ಥಿ ಪ್ರಶ್ನೆಗೆ ಸಂಬಂಧಿಸಿದ ಉತ್ತರ ಬರೆಯುವ ಬದಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರ ಹೆಸರು ಬರೆದಿದ್ದಾನೆ. ಕೆಲವು ವಿದ್ಯಾರ್ಥಿಗಳು ಜೈ ಶ್ರೀರಾಮ್ ಅಂತ ಬರೆದಿದ್ದಾರೆ. ಈ ರೀತಿಯ ಉತ್ತರಗಳಿಗೆ ಹೇಗೆ ಅಂಕ ನೀಡಲಾಗಿದೆ ಎಂದು ಪ್ರಶ್ನಿಸಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ರಷ್ಯಾ ಸೇನೆಯಲ್ಲಿದ್ದ 12 ಭಾರತೀಯರು ಸಾವು, 16 ಮಂದಿ ಕಣ್ಮರೆ: ಕೇಂದ್ರ ಕೊಟ್ಟ ಕೆಲಸ ಬಾಯಿ ಮುಚ್ಚಿಕೊಂಡು ಮಾಡಿ: ಕೈ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ 5 ನಿಮಿಷದಲ್ಲಿ 12 ಕೋಟಿ ಚಿನ್ನಾಭರಣ ಲೂಟಿ: ದರೋಡೆಕೋರರ ಮಾಸ್ಟರ್ ಪ್ಲಾನ್! ಗರ್ಭಿಣಿಯರಿಗೆ 21,000, ಬಡ ಮಹಿಳೆಯರಿಗೆ 2500 ರೂ.: ಬಿಜೆಪಿ ಚುನಾವಣಾ ಪ್ರಣಾಳಿಕೆ ಘೋಷಣೆ ಬೀದರ್ ನಂತರ ಮಂಗಳೂರಿನಲ್ಲಿ ಹಾಡುಹಗಲೇ ಮುಸುಕುಧಾರಿಗಳಿಂದ ಬ್ಯಾಂಕ್ ದರೋಡೆ! ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ನುಡಿದಂತೆ ನಡೆದ ಸಿಎಂ 5 ಗಂಟೆ ಶಸ್ತ್ರಚಿಕಿತ್ಸೆ ನಂತರ ಸೈಫ್ ದೇಹದಿಂದ 2.5 ಇಂಚು ಉದ್ದದ ಚಾಕು ಹೊರತೆಗೆದ ವೈದ್ಯರು! ಫೆ.1ರಿಂದ ಏರ್ ಶೋ: ಯಲಹಂಕದ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಚಟುವಟಿಕೆ ಸ್ಥಗಿತಕ್ಕೆ ಸೂಚನೆ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ: ಸಚಿವ ಆರ್ ಬಿ ತಿಮ್ಮಾಪೂರ ನನ್ನ ಖಾಸಗಿ ವೀಡಿಯೊಗಳನ್ನು ಮರಳಿಸಿ: ಪ್ರಜ್ವಲ್ ರೇವಣ್ಣ ಮನವಿಗೆ ಹೈಕೋರ್ಟ್ ಚಾಟಿ!