Thursday, September 19, 2024
Google search engine
Homeತಾಜಾ ಸುದ್ದಿಕೇಂದ್ರದಿಂದ ತೆರಿಗೆ ತಾರತಮ್ಯ: 8 ರಾಜ್ಯಗಳ ಸಿಎಂ ಸಭೆ ಕರೆದ ರಾಜ್ಯ ಸರ್ಕಾರ!

ಕೇಂದ್ರದಿಂದ ತೆರಿಗೆ ತಾರತಮ್ಯ: 8 ರಾಜ್ಯಗಳ ಸಿಎಂ ಸಭೆ ಕರೆದ ರಾಜ್ಯ ಸರ್ಕಾರ!

ಕೇಂದ್ರದ ತೆರಿಗೆ ಹಂಚಿಕೆ ತಾರತಮ್ಯ ಬಗ್ಗೆ ಚರ್ಚೆ ನಡೆಸಲು 8 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಕರೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 8 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದು, ದಿನಾಂಕ ನಿಗದಪಡಿಸಲಾಗಿಲ್ಲ.

ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಸಿಎಂಗಳನ್ನು ಬೆಂಗಳೂರಿಗೆ ಆಹ್ವಾನಿಸಲಾಗಿದೆ.

ಡಾ. ಅರವಿಂದ್ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಹಣಕಾಸು ಹಂಚಿಕೆ ಕುರಿತು ಚರ್ಚೆ ನಡೆಸಿ ವರದಿ ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕರೆಯಲಾಗಿರುವ 8 ರಾಜ್ಯಗಳ ಸಿಎಂ ಸಭೆ ಮಹತ್ವದ ಪಡೆದಿದೆ.

ಜಿಎಸ್ ಟಿ ಜಾರಿಯಾದ ನಂತರ ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಗಳಿಗೆ ಶೇ.15ರಿಂದ 25ರಷ್ಟು ಪಾಲು ಮಾತ್ರ ನೀಡಲಾಗುತ್ತಿದೆ. ಆದರೆ ಬಿಜೆಪಿ ಆಡಳಿತದ ರಾಜ್ಯಗಳು ತೆರಿಗೆ ಸಂಗ್ರಹದಲ್ಲಿ ಹಿಂದೆ ಇದ್ದರೂ ಅತೀ ಹೆಚ್ಚು ಪಾಲು ಪಡೆಯುತ್ತಿವೆ ಎಂದು ದಕ್ಷಿಣ ಭಾರತದ ರಾಜ್ಯಗಳು ಆರೋಪಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments