Home ಅಪರಾಧ ಪತ್ನಿಯನ್ನು 200 ತುಂಡುಗಳಾಗಿ ಕತ್ತರಿಸಿದ ಕಿರಾತಕ ಪತಿ!

ಪತ್ನಿಯನ್ನು 200 ತುಂಡುಗಳಾಗಿ ಕತ್ತರಿಸಿದ ಕಿರಾತಕ ಪತಿ!

by Editor
0 comments

ಪತ್ನಿಯನ್ನು 200 ತುಂಡುಗಳಾಗಿ ಕತ್ತರಿಸಿದ ಪತಿ ಮಾಂಸದ ತುಂಡುಗಳನ್ನು ಕೆಲವು ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆಘಾತಕಾರಿ ಘಟನೆ ಬ್ರಿಟನ್ ನಲ್ಲಿ ನಡೆದಿದೆ.

28 ವರ್ಷದ ನಿಕೊಲಸ್ ಮೆಟ್ಸನ್ ಈ ಕೃತ್ಯ ಎಸಗಿದ್ದು, 26 ವರ್ಷದ ಪತ್ನಿ ಹೋಲಿ ಬ್ರಾಮ್ಲಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

2023 ಮೇನಲ್ಲಿ ನಡೆದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಒಂದು ವರ್ಷದಿಂದ ನಾನು ಆಕೆಯನ್ನು ಕೊಂದಿಲ್ಲ ಎಂದು ವಾದಿಸುತ್ತಲೇ ಬಂದಿದ್ದ ನಿಕೊಲಸ್ ಶುಕ್ರವಾರ ಪತ್ನಿಯನ್ನು ನಾನೇ ಕೊಂದು 200 ತುಂಡುಗಳಾಗಿ ಕತ್ತರಿಸಿದ್ದೆ. ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟಿದ್ದು ನಂತರ ಸ್ನೇಹಿತನ ನೆರವಿನಿಂದ ನದಿಯಲ್ಲಿ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ತನಿಖೆ ನಡೆಸುತ್ತಿದ್ದ ಪೊಲೀಸರು ಹಲವು ಬಾರಿ ವಿಚಾರಣೆ ನಡೆಸಿದಾಗ ಆಕೆ ಹಾಸಿಗೆ ಕೆಳಗೆ ಬಚ್ಚಿಟ್ಟುಕೊಂಡಿರಬೇಕು ಎಂದು ಹಾಸ್ಯ ಮಾಡುತ್ತಿದ್ದ.

banner

ವಿಚಾರಣೆ ವೇಳೆ ಆಕೆಯನ್ನು ನಾನು ಬೆಡ್ ರೂಮ್ ನಲ್ಲಿ ಹಲವು ಬಾರಿ ಇರಿದು ಕೊಂದಿದ್ದು, ನಂತರ ಬಾತ್ ರೂಮ್ ನಲ್ಲಿ ಶವ ಹೊತ್ತೊಯ್ದು ತುಂಡುಗಳಾಗಿ ಕತ್ತರಿಸಿದೆ. ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮಾಂಸದ ತುಂಡುಗಳನ್ನು ಶೇಖರಿಸಿ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಇರಿಸಿದ್ದೆ ಎಂದು ಪತಿ ವಿವರಿಸಿದ್ದಾನೆ.

ಪೊಲೀಸರು ನಾಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಬರುವ ಕೆಲವೇ ದಿನಗಳ ಮುನ್ನ ಸ್ನೇಹಿತನಿಗೆ 50 ಪೌಂಡ್ ನೀಡಿ ಶವವನ್ನು ಸಾಗಿಸಿದ್ದ. ನಂತರ ಅದನ್ನು ನದಿಯಲ್ಲಿ ಬಿಸಾಡಿದ್ದ. ಒಂದು ಬ್ಯಾಗ್ ನಲ್ಲಿ ಕೈ-ಕಾಲುಗಳು ಹಾಗೂ ಮತ್ತೊಂದರಲ್ಲಿ ಬೋಳಿಸಿದ ತಲೆ ಇರಿಸಿ ವಾಕಿಂಗ್ ನೆಪದಲ್ಲಿ ಬಂದು ಬಿಸಾಡಿದ್ದ ಎಂದು ತಿಳಿದು ಬಂದಿದೆ.

ಪತ್ನಿ ನಾಪತ್ತೆ ಅಥವಾ ಕೊಲೆ ಬಗ್ಗೆ ಪ್ರಶ್ನಿಸಿದರೆ ಆಕೆಯನ್ನು ಕೊಂದರೆ ನನಗೇನು ಸಿಗುತ್ತೆ? ಅಥವಾ ಆಕೆ ಸತ್ತ ನಂತರ ಬಂದು ನನ್ನ ಕಾಡುತ್ತಾಳಾ ಎಂದು ಮರು ಪ್ರಶ್ನಿಸುತ್ತಿದ್ದ.  ಹೆಚ್ಚು ವಿಚಾರಣೆ ನಡೆಸಿದಾಗ ಪತ್ನಿಯೊಂದಿಗೆ ಸಣ್ಣಪುಟ್ಟ ಜಗಳ ಆಗಿದ್ದು, ಆಕೆ ಸಿಟ್ಟಿನಲ್ಲಿ ನನಗೆ ಕಚ್ಚಿದ್ದಾಳೆ ಎಂದು ಕೈ ಮೇಲಿನ ಹಲ್ಲಿನ ಗುರುತು ತೋರಿಸಿದ್ದ. ಆದರೆ ಆಕೆ ಸಾವಿನಿಂದ ಪಾರಾಗಲು ಕಚ್ಚಿದ್ದು ಎಂಬುದು ವಿಚಾರಣೆ ವೇಳೆ ನಂತರ ಗೊತ್ತಾಗಿದೆ.

ವಿಚಾರಣೆ ವೇಳೆ ಪತ್ನಿಯನ್ನು ಯಾಕೆ ಕೊಂದಿದ್ದು ಎಂಬುದು ಮಾತ್ರ ಆತ ಬಾಯಿ ಬಿಟ್ಟಿಲ್ಲ. ಆದರೆ ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!