Friday, October 18, 2024
Google search engine
Homeಜಿಲ್ಲಾ ಸುದ್ದಿರಾಜನಿಗೆ ಸದ್ಯಕ್ಕೆ ದೈವಬಲ ಇಲ್ಲ: ಏರುಪೇರು ಸಹಜ: ರಾಜಕೀಯ ಕುರಿತು ಕೋಡಿಮಠದ ಸ್ವಾಮೀಜಿ ಭವಿಷ್ಯ

ರಾಜನಿಗೆ ಸದ್ಯಕ್ಕೆ ದೈವಬಲ ಇಲ್ಲ: ಏರುಪೇರು ಸಹಜ: ರಾಜಕೀಯ ಕುರಿತು ಕೋಡಿಮಠದ ಸ್ವಾಮೀಜಿ ಭವಿಷ್ಯ

ರಾಜನಿಗೆ ಸದ್ಯಕ್ಕೆ ದೈವಬಲವಿಲ್ಲ. ಹಾಗಾಗಿ ಸ್ವಲ್ಪ ಸಮಯ ರಾಜಕೀಯದಲ್ಲಿ ಏರುಪೇರು ಮುಂದುವರಿಯಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಪತ್ನಿ ರಂಗಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ಗೆಲ್ಲೋದು ರಾಜನೇ ಆಗಿದ್ದಾನೆ. ಆದೇ ಈಗ ದೈವಬಲ ಇಲ್ಲ. ಇನ್ನೂ ಸ್ವಲ್ಪದಿನ ರಾಜ್ಯ ರಾಜಕಾರಣದಲ್ಲಿ ಏರುಪೇರು ಮುಂದುವರೆಯಲಿದೆ ಎಂದರು.

ಪ್ರಸ್ತುತ ಮುಡಾ ಸೈಟು ಪ್ರಕರಣ ಸೇರಿದಂತೆ ನಾನಾ ಕಡೆ ಆರೋಪಗಳು ಹಾಗೂ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಕೇಳಿ ಬರುತ್ತಿದೆ. ರಾಜ್ಯಪಾಲರ ಒತ್ತಡ ಹಾಗೂ ಪ್ರತಿಪಕ್ಷಗಳ ಒತ್ತಡಗಳಿಂದ ರಾಜ್ಯ ರಾಜಕೀಯದಲ್ಲಿ ಏರುಪೇರು ನಡೆಯುತ್ತಿದೆ.

ಇದೇ ವೇಳೆ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಅವರ ಮುಂದಿನ ಭವಿಷ್ಯದ ಕುರಿತು ಮಾಧ್ಯಮ ಕೇಳಿದ ಪ್ರಶ್ನೆಗೆ ಪಾಪದ ಪಾಶ ಉಚ್ಚಿದರೆ ಎಲ್ಲವು ಸರಿಯಾಗುತ್ತೆ. ಈಗ ನಾವು ಪಾಯಸ ಮಾಡುವಾಗ ಬೆಲ್ಲ ಹಾಕಿ ಪಾಯಸ ಮಾಡುತ್ತೇವೆ. ಅದಕ್ಕೆ ಬೆಲ್ಲದಲ್ಲೇ ಕೊಳೆ ಇರುತ್ತದೆ. ಪಾಯಸ ಉಕ್ಕಿದಾಗ ಮೇಲೆ ಕೊಳೆ ಬರುತ್ತೆ. ಕೊಳೆ ತೆಗೆದಾಗ ಪಾಯಸ ಸಿಹಿಯಾಗುತ್ತದೆ. ಹಾಗೆ ಮನುಷ್ಯನ ಪಾಪ ಹೋಗಬೇಕು. ತಾನು ಮಾಡಿದ ಕರ್ಮ ಬಲವಂತವಾದರೆ ಯಾರೇನು ಮಾಡುವರು. ಮನುಷ್ಯ ಪುಣ್ಯ ಮಾಡೋಕೆ ಹೆದರಬಾರದು, ಪಾಪ ಮಾಡೋಕೆ ಹೆದರಬೇಕು. ಆದರೆ ನಾವು ಪಾಪ ಮಾಡೋಕೆ ಹೆದರುವುದಿಲ್ಲ ಪುಣ್ಯ ಮಾಡೋಕೆ ಹೆದರುತ್ತಿದ್ದೇವೆ ಎಂದು ಮಾರ್ಮಿಕವಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments