Saturday, September 7, 2024
Google search engine
Homeಜಿಲ್ಲಾ ಸುದ್ದಿಅಗಲಿದ್ದಾರೆ ಎಂದು ಎಲ್.ಕೆ. ಅಡ್ವಾಣಿ ಮೌನಾಚರಣೆ ಮಾಡಿಸಿ ಕೇಂದ್ರ ಸಚಿವ ಸೋಮಣ್ಣ ಎಡವಟ್ಟು!

ಅಗಲಿದ್ದಾರೆ ಎಂದು ಎಲ್.ಕೆ. ಅಡ್ವಾಣಿ ಮೌನಾಚರಣೆ ಮಾಡಿಸಿ ಕೇಂದ್ರ ಸಚಿವ ಸೋಮಣ್ಣ ಎಡವಟ್ಟು!

ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್​​.ಕೆ.ಅಡ್ವಾಣಿ ಅವರು ನಿಧನರಾಗಿದ್ದಾರೆ ಅವರಿಗೆ ಮೌನಾಚರಣೆ ಮಾಡೋಣ ಕರೆ ನೀಡುವ ಮೂಲಕ ಕೇಂದ್ರ ಸಚಿವ ವಿ.ಸೋಮಣ್ಣ ಎಡವಟ್ಟು ಮಾಡಿ ಮುಜುಗರಕ್ಕೆ ಒಳಗಾಗಿದ್ದಾರೆ.

ತುಮಕೂರಿನ ಗುಬ್ಬಿಯಲ್ಲಿ ಶನಿವಾರ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸೋಮಣ್ಣ ಎಡವಟ್ಟು ಮಾಡಿದ್ದಾರೆ.  ಅಷ್ಟೇ ಅಲ್ಲದೇ ಅಡ್ವಾಣಿ ಮೃತಪಟ್ಟಿದ್ದಾರೆ ಸುದ್ದಿ ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದರೆ ನೀವು ಹೇಳಿದ್ದು ಸರಿಯಾಗಿದೆ ಎಂದು ಕಾರ್ಯಕರ್ತರು ತಲೆ ಅಲ್ಲಾಡಿಸಿ ತಮ್ಮ ಅಜ್ಞಾನವನ್ನು ಪ್ರದರ್ಶನ ಮಾಡಿದ್ದಾರೆ.

ಕಾರ್ಯಕರ್ತರು ನೀವು ಹೇಳಿದ್ದು ನಿಜ ಎಂದಾಗ ಪರಿಶೀಲಿಸಲು ಹೋಗದ ಸೋಮಣ್ಣ ಅವರ ಮಾತನ್ನು ನಂಬಿ ಅಡ್ವಾಣಿಗೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದೂ ಅಲ್ಲದೇ ಅವರ ಗುಣಗಾನ ಮಾಡಿದ್ದಾರೆ.

ಸಭೆ ಮುಗಿದು ಕೆಲವು ಗಂಟೆಗಳ ನಂತರ ತಮ್ಮ ಅರಿವು ಆಗುತ್ತಿದ್ದಂತೆ ಸೋಮಣ್ಣ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ.

ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಡ್ವಾಣಿ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ಅಡ್ವಾಣಿ ಎರಡು ಬಾರಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments