Friday, May 17, 2024
Google search engine
Homeತಾಜಾ ಸುದ್ದಿಕರೆ ಮಾಡಿದ್ದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸುಧಾಕರ್ ಗೆ ವಿಶ್ವನಾಥ್ ಸವಾಲು

ಕರೆ ಮಾಡಿದ್ದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸುಧಾಕರ್ ಗೆ ವಿಶ್ವನಾಥ್ ಸವಾಲು

ನನಗೆ ಕರೆ ಮಾಡಿದ್ದಾಗಲಿ, ವಾಯ್ಸ್ ಮೆಸೇಜ್ ಕಳುಹಿಸಿದ್ದಾಗಲಿ ಕೆ.ಸುಧಾಕರ್ ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ತಮ್ಮ ನಿವಾಸಕ್ಕೆ ಭೇಟಿ ನೀಡಿದಾಗ ಇರಲಿಲ್ಲ. ಅಲ್ಲದೇ ಸಾಕಷ್ಟು ಬಾರಿ ಕರೆ ಮಾಡಿ ವಾಯ್ಸ್ ಮೆಸೇಜ್ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಸುಧಾಕರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ಹೆಸರು ಹೇಳಿ ಮತ ಕೇಳಲು ಹೋದರೆ ಪಕ್ಷಕ್ಕೆ ಹಿನ್ನಡೆ ಆಗಲಿದೆ. ಅಲ್ಲದೇ ಟಿಕೆಟ್ ದೊರೆತ ನಂತರ ಆಗಲಿ ಅದಕ್ಕೂ ಮೊದಲಾಗಲಿ ಸುಧಾಕರ್ ನನಗೆ ಕರೆ ಮಾಡಿಲ್ಲ. ವಾಯ್ಸ್ ಮೆಸೇಜ್ ಕಳುಹಿಸಿಲ್ಲ. ಅದನ್ನು ಸಾಬೀತುಪಡಿಸಿದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments