Sunday, December 7, 2025
Google search engine
Homeದೇಶದೇಶಾದ್ಯಂತ ಜಲಮಾರ್ಗಗಳ ಅಭಿವೃದ್ದಿಗೆ 50 ಸಾವಿರ ಕೋಟಿ ಹೂಡಿಕೆಗೆ ಐಡಬ್ಲ್ಯೂಡಿಸಿ ನಿರ್ಧಾರ

ದೇಶಾದ್ಯಂತ ಜಲಮಾರ್ಗಗಳ ಅಭಿವೃದ್ದಿಗೆ 50 ಸಾವಿರ ಕೋಟಿ ಹೂಡಿಕೆಗೆ ಐಡಬ್ಲ್ಯೂಡಿಸಿ ನಿರ್ಧಾರ

ಬೆಂಗಳೂರು: ದೇಶಾದ್ಯಂತ ಜಲಮಾರ್ಗಗಳ ಮೂಲಸೌಕರ್ಯ ನವೀಕರಣಕ್ಕೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ವಿನಿಯೋಗಿಸುವುದಾಗಿ ಒಳನಾಡು ಜಲಮಾರ್ಗಗಳ ಅಭಿವೃದ್ಧಿ ಮಂಡಳಿ (ಐಡಬ್ಲ್ಯೂಡಿಸಿ) ಘೋಷಿಸಿದೆ.

ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ (ಐಡಬ್ಲ್ಯೂಎಐ) ಅಡಿಯಲ್ಲಿ ಜಲಮಾರ್ಗಗಳ ಅಭಿವೃದ್ಧಿಯ ನೋಡಲ್ ಏಜೆನ್ಸಿಯಾದ ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯೂಡಿಸಿ) ಆಯೋಜಿಸಿದ ಐಡಬ್ಲ್ಯೂಡಿಸಿಯ ಎರಡನೇ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.

ಮುಂದಿನ ಐದು ವರ್ಷಗಳಲ್ಲಿ ರೂ. 50,000 ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ವಿವಿಧ ರಾಜ್ಯಗಳ 21 ಒಳನಾಡು ಜಲಮಾರ್ಗಗಳ ಅಭಿವೃದ್ದಿಗೆ ೧೪೦೦ ಕೋಟಿ ರೂ.ಗೂ ಅಧಿಕ ಮೊತ್ತ ವಿನಿಯೋಗಿಸಲು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ವಹಿಸಿದ್ದರು. ಅಸ್ಸಾಂನ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರೊಂದಿಗೆ ಐಡಬ್ಲ್ಯೂಡಿಸಿ ಸಭೆ ಉದ್ಘಾಟಿಸಿದರು.

rivers
rivers

ನದಿಯ ಪರಿಸರ ವ್ಯವಸ್ಥೆಯೊಂದಿಗೆ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಕೌಶಲ್ಯ ಪುಷ್ಟೀಕರಣ ತರಬೇತಿ ಮತ್ತು ಸಾಂಪ್ರದಾಯಿಕ ಉನ್ನತೀಕರಣವನ್ನು ಒದಗಿಸುವುದು ಹೀಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಮತ್ತು ರಾಷ್ಟ್ರೀಯ ಜಲಮಾರ್ಗಗಳ ದಡಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ ಸಮುದಾಯಗಳ ನದಿಯ ಜ್ಞಾನ ಹೆಚ್ಚಿಸುವ ಮೂಲಕ ಕರಾವಳಿ ಸಮುದಾಯಗಳ ಸಾಮಾಜಿಕ- ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸಲು ನದಿಯ ಸಮುದಾಯ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಪ್ರಮುಖ ನೀತಿ ಉಪಕ್ರಮವನ್ನು ಐಡಬ್ಲ್ಯೂಡಿಸಿಯಲ್ಲಿ ಪ್ರಸ್ತಾಪಿಸಲಾಯಿತು,

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್, “ಕೇಂದ್ರ ಮತ್ತು ರಾಜ್ಯ ಹೀಗೆ ಎರಡೂ ಸರ್ಕಾರಗಳು ಒಳನಾಡು ಜಲಮಾರ್ಗಗಳನ್ನು ಬಲಪಡಿಸುವ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ರೂಪಿಸುವ ಕುರಿತು ಐಡಬ್ಲ್ಯುಡಿಸಿ ಹೊಸ ದೃಷ್ಟಿಕೋನವನ್ನು ರೂಪಿಸಿದೆ ಎಂದರು.

ಐಡಬ್ಲ್ಯೂಡಿಸಿಯಲ್ಲಿ, ಆರ್ಥಿಕ ಅಭಿವೃದ್ಧಿಗೆ ಅವಕಾಶಗಳನ್ನು ಅನಾವರಣ ಮಾಡುವ ಪ್ರಯತ್ನದಲ್ಲಿ ನಾವು ಸವಾಲುಗಳ ಮೇಲೆ ಉಬ್ಬರವಿಳಿತದ ಪರಿಹಾರಗಳನ್ನು ಕಂಡುಕೊಂಡಿದ್ದೇವೆ. ಈ ನಿಟ್ಟಿನಲ್ಲಿ, ನಾವು 1000 ಪರಿಸರಸ್ನೇಹಿ ಹಡಗುಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.

ದೇಶದ 21 ರಾಜ್ಯಗಳಲ್ಲಿ ಒಳನಾಡು ಜಲಮಾರ್ಗ ಸಾರಿಗೆ ಜಾಲವನ್ನು ಹೆಚ್ಚಿಸಲು ರೂ. 1400 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಉಪಕ್ರಮಗಳನ್ನು ಅನಾವರಣಗೊಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಚಿವಾಲಯವು ಇತ್ತೀಚೆಗೆ ‘ಕ್ರೂಸ್ ಭಾರತ್ ಮಿಷನ್’ ಅನ್ನು ಪ್ರಾರಂಭಿಸಿದೆ, 10 ಸಮುದ್ರ ಕ್ರೂಸ್ ಟರ್ಮಿನಲ್ಗದಳು, 100 ರಿವರ್ ಕ್ರೂಸ್ ಟರ್ಮಿನಲ್ಗ ಳು ಮತ್ತು ಐದು ಮರಿನಾಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಸರ್ಬಾನಂದ ಸೋನೊವಾಲ್ ಹೇಳಿದರು.

ಕರ್ನಾಟಕಕ್ಕೆ ಘೋಷಣೆಗಳು

ಐಡಬ್ಲ್ಯೂಡಿಸಿಯಲ್ಲಿ ಕರ್ನಾಟಕಕ್ಕಾಗಿ ಮಾಡಿದ ಪ್ರಮುಖ ಘೋಷಣೆಗಳಲ್ಲಿ ಶರಾವತಿ ನದಿಯ ಎರಡು ಜೆಟ್ಟಿಗಳು ಮತ್ತು ಕಬಿನಿ ನದಿಯ ಒಂದು ಜೆಟ್ಟಿ ಸೇರಿವೆ. ಇದಲ್ಲದೆ, ಗುರುಪುರ ನದಿ ಮತ್ತು ನೇತ್ರಾವತಿ ನದಿಯಲ್ಲಿ ಜೆಟ್ಟಿಗಳನ್ನು ಘೋಷಿಸಲಾಯಿತು. ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟು ಮತ್ತು ಘಟಪ್ರಭಾ ನದಿಯ ಹೆರ್ಕಲ್ ನಡುವಿನ ನದಿ ವಿಹಾರವನ್ನು ಸಹ ಘೋಷಿಸಲಾಯಿತು.

ನದಿಯ ವಿಹಾರಕ್ಕಾಗಿ ಉದ್ಯಾವರ ಮತ್ತು ಪಂಚಗಂಗಾವಳಿ ನದಿಗಳನ್ನು ಸಹ ಕಾರ್ಯಗತಗೊಳಿಸಲಾಯಿತು. ಇದಲ್ಲದೆ, ಜೆಟ್ಟಿ ಮತ್ತು ಕಾಳಿ ನದಿಯಲ್ಲಿಪಥದರ್ಶನ ನೆರವು ಮೂಲಕ ಸಾಮಥ್ರ್ಯ ವರ್ಧನೆಯನ್ನು ಘೋಷಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments