Saturday, October 19, 2024
Google search engine
Homeತಾಜಾ ಸುದ್ದಿಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ: ರಾತ್ರೋರಾತ್ರಿ ಮನೆ ನೆಲಸಮ, ಬೀದಿಗೆ ಬಂದ ತಾಯಿ-ಮಗ!

ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ: ರಾತ್ರೋರಾತ್ರಿ ಮನೆ ನೆಲಸಮ, ಬೀದಿಗೆ ಬಂದ ತಾಯಿ-ಮಗ!

ಮನೆ ಖಾಲಿ ಮಾಡಲಿಲ್ಲ ಅಂತ ರಾತ್ರೋರಾತ್ರಿ ರೌಡಿಗಳು ಮನೆ ನೆಲಸಮಗೊಳಿಸಿದ್ದರಿಂದ ತಾಯಿ-ಮಗ ಬೀದಿಗೆ ಬಂದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಮನೆ ಖಾಲಿ ಮಾಡದ್ದಕ್ಕೆ ತಾಯಿ ಮಗನ ಹಲ್ಲೆ ಮಾಡಿರುವ ರೌಡಿಗಳು ಜಯಲಕ್ಷ್ಮಿ ಅವರಿಗೆ ಸೇರಿದ ಮನೆಯನ್ನು ಅವರ ಕಣ್ಣೇದುರೆ ನೆಲಸಮ ಮಾಡಿ ವಿಕೃತಿ ಮೆರೆದಿದ್ದಾರೆ.

ಜೈ ಕಿಶನ್, ಪ್ರತಾಪ್, ಚಿನ್ನಬಾಬು ಕಡೆಯವರು ಜಯಲಕ್ಷ್ಮೀ ಅವರ ಮಗನ ಕೈಯನ್ನು ಹಿಂದಕ್ಕೆ ಕಟ್ಟಿ, ಕೈಕಾಲುಗಳ‌ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅಕ್ಟೋಬರ್ 7ರಂದು ಬೆಳಗ್ಗೆ 4-5 ಗಂಟೆಯ ಸುಮಾರಿಗೆ 40-50 ಜನರ ಗುಂಪು ಜಯಲಕ್ಷ್ಮೀ ಅವರ ಮಕ್ಕಳು, ಮೊಮ್ಮಕ್ಕಳ ಕತ್ತಿಗೆ ಮೇಲೆ ಮಾರಕಾಸ್ತ್ರ ಇರಿಸಿ ಬೆದರಿಕೆ ಹಾಕಿ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ.

ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಜಯಲಕ್ಷ್ಮಿ ದೂರು ನೀಡಿದ್ದು, ಜಯಲಕ್ಷ್ಮಿ ಮತ್ತವರ ಕುಟುಂಬ ಮಲ್ಲೇಶ್ವದ 18ನೇ ಕ್ರಾಸ್‌ನಲ್ಲಿ ಕಳೆದ 45 ವರ್ಷಗಳಿಂದ ವಾಸವಿದ್ದು, ಒಂದು ತಿಂಗಳಿನಿಂದ ಮನೆ ಖಾಲಿ ಮಾಡ್ಕೊಂಡು‌ ಹೋಗಿ ಅಂತ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಲ್ಲೇಶ್ವರ 18ನೇ ಕ್ರಾಸ್ ನಲ್ಲಿ ಹೂವು ಮಾರಿಕೊಂಡು ಜೀವನ ನಡೆಸುತ್ತಿದ್ದು, ಮನೆಯ ಮಾಲೀಕರು ಮನೆ ಬಿಟ್ಟುಕೊಟ್ಟು ಇಲ್ಲಿಯೇ ವಾಸ ಮಾಡುವಂತೆ ಹೇಳಿದ್ದರು. ಕಳೆದ 40-45 ವರ್ಷಗಳಿಂದ ಇದೇ ಮನೆಯಲ್ಲಿ ವಾಸವಾಗಿದ್ದು, ಮನೆಯ ಮಾಲೀಕರು ತೀರಿಕೊಂಡಿದ್ದಾರೆ. ಅಲ್ಲದೇ ಕೆಲವು ವರ್ಷಗಳ ಹಿಂದೆ ಪತಿಯೂ ತೀರಿಕೊಂಡಿದ್ದು ನ್ಯಾಯ ದೊರಕಿಸಿಕೊಡುವಂತೆ ಜಯಲಕ್ಷ್ಮೀ ಪೊಲೀಸರಿಗೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments