Friday, October 18, 2024
Google search engine
Homeಅಪರಾಧಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ: ಸಿಐಎಸ್ ಎಫ್ ರೈಫಲ್ ಕಸಿಯಲು ಯತ್ನ!

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ: ಸಿಐಎಸ್ ಎಫ್ ರೈಫಲ್ ಕಸಿಯಲು ಯತ್ನ!

ಸಿಐಎಸ್ ಎಫ್ ಯೋಧನಿಂದ ವ್ಯಕ್ತಿಯೊಬ್ಬ ರೈಫಲ್ ಕದಿಯಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಕ್ಟೋಬರ್ 14ರಂದು ಈ ಘಟನೆ ನಡೆದಿದ್ದು, ಕಸ್ತೂರಿ ನಗರದ ನಿವಾಸಿ 35 ವರ್ಷದ ವಿಕ್ರಂ ರಾಮದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ನಿಂದ ಬೆಳಿಗ್ಗೆ ಆಗಮಿಸಿದ್ದ ವಿಕ್ರಂ ರಾಮದಾಸ್ ಅಚಾತುರ್ಯದಿಂದ ಮತ್ತೊಬ್ಬರ ಲಗೇಜ್ ತೆಗೆದುಕೊಂಡಿದ್ದರು. ಇದರಿಂದ ಸಹ ಪ್ರಯಾಣಿಕರ ಜೊತೆ ಸಣ್ಣ ಘರ್ಷಣೆ ಉಂಟಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಭಧ್ರತೆ ನಿಯೋಜಿಸಿದ್ದ ಸಿಐಎಸ್ ಎಫ್ ಯೋಧ ಸಮಾಧಾನಪಡಿಲು ಯತ್ನಿಸಿದ.

ಈ ವೇಳೆ ಏಕಾಏಕಿ ರಾಮದಾಸ್ ಯೋಧರ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಸಿಐಎಸ್ ಎಫ್ ಯೋಧ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದು ರಾಮದಾಸ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಮದಾಸ್ ನನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments