Wednesday, August 26, 2026
Google search engine
Homeವಿದೇಶನೇಪಾಳದಲ್ಲಿ ಭೀಕರ ಪ್ರವಾಹ: ಶತಕ ದಾಟಿದ ಸಾವಿನ ಸಂಖ್ಯೆ, 100 ಭಾರತೀಯರು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ: ಶತಕ ದಾಟಿದ ಸಾವಿನ ಸಂಖ್ಯೆ, 100 ಭಾರತೀಯರು ನಾಪತ್ತೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 100 ದಾಟಿದ್ದು, 100 ಭಾರತೀಯರು ಸೇರಿದಂತೆ 400ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಹಿಮಾಲಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಉಂಟಾದ ಹಿಮಪಾತದ ಪರಿಣಾಮ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭೋಟೆ ಕೋಶಿ ನದಿ ದಿಢೀರನೆ ಉಕ್ಕಿ ಹರಿದಿದ್ದು, ಟಿಬೆಟ್‌ನ ಗಡಿಯಲ್ಲಿರುವ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳ ಮೇಲೆ ಭೀಕರ ಪರಿಣಾಮ ಬೀರಿದೆ. ನಂತರ ಅದು ಧಾಡಿಂಗ್, ನುವಾಕೋಟ್ ಮತ್ತು ಚಿತಾವಾನ್ ಜಿಲ್ಲೆಗಳಿಗೂ ಹರಡಿದ್ದು, ಕನಿಷ್ಠ ನಾಲ್ಕು ಶಾಶ್ವತ ಸೇತುವೆಗಳು ಮತ್ತು ಕೆಲವು ತಾತ್ಕಾಲಿಕ ಸೇತುವೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಬೆಟ್-ರಸುವಾಗಧಿ ಗಡಿ ಪ್ರದೇಶದಿಂದ ಈಶಾನ್ಯಕ್ಕೆ 20 ಕಿಲೋಮೀಟರ್​ ದೂರದಲ್ಲಿರುವ ನೇಪಾಳ-ಟಿಬೆಟ್ ಗಡಿಯ ಬಳಿ ಇರುವ ಅಸ್ಥಿರ ಪರ್ವತ ಶಿಲಾ ದ್ರವ್ಯರಾಶಿಯಿಂದ ಉಂಟಾದ ಬಂಡೆ ಕುಸಿತದಿಂದಾಗಿ ದಿಢೀರ್ ಪ್ರವಾಹ ಸಂಭವಿಸಿದೆ. ಪರಿಹಾರ ರಕ್ಷಣೆಗೆ 14 ಹೆಲಿಕಾಪ್ಟರ್‌ ಸೇರಿದಂತೆ ಭಾರೀ ಪ್ರಮಾಣದಲ್ಲಿ ಸೇನೆಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಾನ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯರು ಹಾಗೂ ಈಶಾ ಫೌಂಡೇಷನ್‌ ನ 70 ಪ್ರವಾಸಿಗರು ನಾಪತ್ತೆಯಾಗಿದ್ದಾಋಎ ಎಂದು ತಿಳಿದು ಬಂದಿದೆ. ಭಾರತೀಯ ರಾಯಭಾರ ಕಚೇರಿ ನೇಪಾಳ ಸಂಪರ್ಕದಲ್ಲಿದ್ದು, ಭಾರತೀಯರ ರಕ್ಷಣೆಗೆ ನೆರವು ನೀಡುವುದಾಗಿ ಹೇಳಿದೆ.

ಕಾಣೆಯಾದ ಸುಮಾರು 400 ಜನರಲ್ಲಿ ಕನಿಷ್ಠ 105 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ. ಇದಲ್ಲದೆ, 44 ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ 80 ಭದ್ರತಾ ಸಿಬ್ಬಂದಿ ವಿವಿಧ ಸ್ಥಳಗಳಲ್ಲಿ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ ನೀಡಿದ್ದಾರೆ.

ಪ್ರವಾಹದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಧಾಡಿಂಗ್‌ನಲ್ಲಿ ಆರು ಜನರು, ನುವಾಕೋಟ್‌ನಲ್ಲಿ ಮೂವರು ಮತ್ತು ರಸುವಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ನೇಪಾಳ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾ ಮಾಹಿತಿಯ ಪ್ರಕಾರ, ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಅಪಾಯ ಮುಂದುವರೆದಿದೆ ಎಂದು ಹೇಳಿದೆ. ನದಿ ಅಡಚಣೆ ಇರುವ ಸ್ಥಳದಲ್ಲಿ ಸರೋವರವನ್ನು ಸಂಪೂರ್ಣವಾಗಿ ಬರಿದಾಗಿಸದಿದ್ದರೂ, ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಅಪಾಯ ಮುಂದುವರೆದಿದೆ ಮತ್ತು ಮುಂದಿನ ಮುನ್ಸೂಚನೆ ನೀಡುವವರೆಗೆ ಜನರು ನದಿಯಿಂದ ದೂರವಿರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ಒತ್ತಾಯಿಸಲಾಗಿದೆ ಎಂದು ವಿವರಿಸಿದೆ.

ರಸುವಾ ಪ್ರವಾಹದಿಂದಾಗಿ ಒಟ್ಟು 384 ಪ್ರಯಾಣಿಕರು, 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ಕಾಣೆಯಾಗಿದ್ದಾರೆ.

ಭಾರತೀಯರು ಮತ್ತು ಅನಿವಾಸಿ ಭಾರತೀಯರನ್ನು ಹೊರತುಪಡಿಸಿ, ಉಳಿದ ಪ್ರವಾಸಿಗರು ಯುಎಸ್, ಮಲೇಷ್ಯಾ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ ಪ್ರವಾಸಿಗರಾಗಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಕನಿಷ್ಠ 59 ಭಾರತೀಯರು ಯಾತ್ರಿಕರಾಗಿದ್ದಾರೆ.

ಭಾರತೀಯರಿಗೆ ಸಹಾಯವಾಣಿ

ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹಠಾತ್ ಪ್ರವಾಹದಿಂದ ತೊಂದರೆಗೊಳಗಾದ ಭಾರತೀಯ ಪ್ರಜೆಗಳಿಗೆ ಸಹಾಯ ಮತ್ತು ಮಾಹಿತಿಗಾಗಿ ತುರ್ತು ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. X ನಲ್ಲಿ ಪೋಸ್ಟ್‌ನಲ್ಲಿ, ಜನರು +977 985 131 6807 ಅಥವಾ +977 970 910 7500 ಅನ್ನು ಸಂಪರ್ಕಿಸಬಹುದು.

ನೇಪಾಳ ಸರ್ಕಾರದ ಸಮನ್ವಯದೊಂದಿಗೆ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ಬಲಪಡಿಸಲಾಗುತ್ತಿದೆ ಎಂದು ಅದು ಹೇಳಿದೆ. ನೇಪಾಳ ಪ್ರವಾಸೋದ್ಯಮ ಮಂಡಳಿಯು ಸಹಾಯಕ್ಕಾಗಿ ಟೋಲ್ ಫ್ರೀ ತುರ್ತು ಸಂಖ್ಯೆ 1234 ಅಥವಾ ಹಾಟ್‌ಲೈನ್ 1144 ಅಥವಾ ಪ್ರವಾಸಿ ಪೊಲೀಸ್ 9851289445 ಸೇರಿದಂತೆ ಇದೇ ರೀತಿಯ ಸಂಖ್ಯೆಗಳನ್ನು ಸಹ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments