Saturday, October 5, 2024
Google search engine
Homeತಾಜಾ ಸುದ್ದಿಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಗೌಪ್ಯವಾಗಿ ಭೇಟಿ ನೀಡಿದ ಇಡೀ ಕುಟುಂಬ!

ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಗೌಪ್ಯವಾಗಿ ಭೇಟಿ ನೀಡಿದ ಇಡೀ ಕುಟುಂಬ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ ಅವರನ್ನು ಇಡೀ ಕುಟುಂಬ ಗೌಪ್ಯವಾಗಿ ಭೇಟಿ ಮಾಡಿದೆ. ಈ ಮೂಲಕ ಜೈಲು ನಿಯಮ ಜನ ಸಾಮಾನ್ಯರಿಗೊಂದು, ಸೆಲೆಬ್ರೆಟಿಗಳಿಗೆ ಒಂದು ಎಂಬಂತಾಗಿದೆ.

ವಿಚಾರಣಾಧೀನ ಕೈದಿಗಳನ್ನು ಸಾಮಾನ್ಯವಾಗಿ ಕುಟುಂಬದವರ ಭೇಟಿಗೆ ಪದೇಪದೆ ಅವಕಾಶ ನೀಡಲಾಗುವುದಿಲ್ಲ. ದರ್ಶನ್ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಪೊಲೀಸ್ ಇಲಾಖೆಯೇ ಇದೀಗ ಕುಟುಂಬದವರು ಪದೇಪದೆ ಭೇಟಿ ಮಾಡಲು ಅವಕಾಶ ನೀಡುತ್ತಿದ್ದಾರೆ.

ಸೋಮವಾರ ಬೆಳಿಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಮಾಧ್ಯಮಗಳ ಕಣ್ಣು ತಪ್ಪಿಸಿ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿಗೆ ಮಾಧ್ಯಮಗಳ ಕಣ್ಣು ತಪ್ಪಿಸಲು ಖಾಸಗಿ ವಾಹನದಲ್ಲಿ ಬಂದ ದರ್ಶನ್ ಕುಟುಂಬ ಜೈಲಿನ ಒಳಗೆ ಹೋಗಿ ಭೇಟಿ ಮಾಡಿದೆ.

ಬಂಧಿಖಾನೆ ಇಲಾಖೆ ಕಾನೂನು ಗಾಳಿಗೆ ತೂರಿ ರಾಜಾತಿಥ್ಯ ನೀಡಲಾಗುತ್ತಿದ್ದು, ದರ್ಶನ್ ಕುಟುಂಬದವರನ್ನು ಸ್ವತಃ ಪೊಲೀಸರಿಗೆ ಖುದ್ದಾಗಿ ಒಳಗೆ ಕರೆದೊಯ್ದು ಭೇಟಿ ಮಾಡಿಸಿದ್ದಾರೆ.

ಸುಮಾರು 10 ಗಂಟೆ ಸುಮಾರಿಗೆ ಜೈಲು ಬಳಿ ಬಂದ ದರ್ಶನ್ ಕುಟುಂಬದ ಸದಸ್ಯರನ್ನು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಉದಯ್ ಎಂಬುವವರು ಒಳಗೆ ಕರೆದೊಯ್ದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಇದೇ ಉದಯ್ ದರ್ಶನ್ ಅವರನ್ನು ಭೇಟಿ ಮಾಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments