Monday, September 16, 2024
Google search engine
Homeಕ್ರೀಡೆಭಾರತಕ್ಕೆ ಮರಳಿದ ಟಿ-20 ವಿಶ್ವ ಚಾಂಪಿಯನ್ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ!

ಭಾರತಕ್ಕೆ ಮರಳಿದ ಟಿ-20 ವಿಶ್ವ ಚಾಂಪಿಯನ್ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ!

ಟಿ-20 ವಿಶ್ವಕಪ್ ಗೆದ್ದು 17 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ ಬರ ನೀಗಿಸಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಸ್ವದೇಶಕ್ಕೆ ಮರಳಿದ್ದು, ಭರ್ಜರಿ ಸ್ವಾಗತ ದೊರೆಯಿತು.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ತಂಡ ಒಂದೂ ಪಂದ್ಯ ಸೋಲದೇ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಭಾರತಕ್ಕೆ ಸ್ವದೇಶಕ್ಕೆ ಮರಳಲು ತಡವಾಗಿದ್ದು ಕೊನೆಗೂ ಸುರಕ್ಷಿತವಾಗಿ ಮರಳಿದೆ.

ಗುರುವಾರ ಬೆಳಿಗ್ಗೆ ದೆಹಲಿಗೆ ವಿಶೇಷ ವಿಮಾನದ ಮೂಲಕ ಭಾರತ ತಂಡ ಆಗಮಿಸಿತು. ಆಟಗಾರರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಬಿಸಿಸಿಐ ಭಾರತ ತಂಡದ ಆಟಗಾರರಿಗೆ ಮೆರವಣಿಗೆ ಆಯೋಜಿಸಿದ್ದು, ಪ್ರಧಾನಿ ಭೇಟಿ ನಂತರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ತಂಡ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ನಂತರ ಚಂಡಮಾರುತದ ಕಾರಣ ಫೈನಲ್ ಪಂದ್ಯ ನಡೆದ ಬಾರ್ಬಡಾಸ್ ನಲ್ಲಿಯೇ ಕಳೆಯಬೇಕಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments