Tuesday, October 8, 2024
Google search engine
Homeಕಾನೂನುದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

ದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ (ಅಕ್ಟೋಬರ್ 9) ಮುಂದೂಡಲಾಗಿದೆ.

57ನೇ ಎಚ್ ಸಿಸಿಎಚ್ ನ್ಯಾಯಲಯದ ನ್ಯಾಯಾಧೀಶರು ಸುದೀರ್ಘ ವಿಚಾರಣೆ ನಂತರ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.

ಸರ್ಕಾರದ ಪರ ವಕೀಲ ಎಸ್ ಪಿ ಪ್ರಸನ್ನ ಕುಮಾರ್ ಸುದೀರ್ಘ ವಾದ ಮಂಡಿಸಿದ್ದು, ನಾಳೆಗೆ ಮತ್ತಷ್ಟು ವಿಷಯಗಳ ಕುರಿತು ವಾದ ಮಂಡಿಸಲು ಅವಕಾಶ ಕೋರಿದರು. ಅಲ್ಲದೇ ನಾಳೆ ವಾದ ಅಂತಿಮಗೊಳಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ವಿಚಾರಣೆಯಲ್ಲಿ ತಾಂತ್ರಿಕ ಸಾಕ್ಷ್ಯಗಳ ಕುರಿತು ನಾಳೆ ಪ್ರಸ್ತಾಪಿಸುವುದಾಗಿ ಸರ್ಕಾರಿ ಪರ ವಕೀಲರು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು. ಇದೇ ವೇಳೆ ದರ್ಶನ್ ಪರ ಸಿವಿ ನಾಗೇಶ್ ಪ್ರತಿವಾದ ಮಂಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments