Thursday, September 19, 2024
Google search engine
Homeಜಿಲ್ಲಾ ಸುದ್ದಿಹಾವೇರಿಯಲ್ಲಿ ಕರೆಂಟ್ ಹೊಡೆದು ತಂದೆ-ಮಗ ಪಂಪ್ ಸೆಟ್ ಮೇಲೆ ಸಾವು!

ಹಾವೇರಿಯಲ್ಲಿ ಕರೆಂಟ್ ಹೊಡೆದು ತಂದೆ-ಮಗ ಪಂಪ್ ಸೆಟ್ ಮೇಲೆ ಸಾವು!

ಭತ್ತದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ದುರಸ್ತಿ ಮಾಡಲು ಹೋದ ತಂದೆ-ಮಗ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ.

ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದ್ದು, ತಂದೆ ಕರಬಸಪ್ಪ ಮಗ ದರ್ಶನ್ ಮೃತಪಟ್ಟ ದುರ್ದೈವಿಗಳು.

ಭತ್ತದ ಬೆಳೆಗೆ ನೀರು ಹಾಯಿಸಲು ಕೆಟ್ಟು ನಿಂತಿದ್ದ ಪಂಪ್ ಸೆಟ್ ರೀಪೆರಿಗೆ ತಂದೆ-ಮಗ ಹೋಗಿದ್ದಾರೆ. ಮೋಟಾರ್ ಆನ್ ಮಾಡಲು ಹೋದಾಗ ಕರೆಂಟ್ ಹೊಡೆದು ಇಬ್ಬರೂ ಪಂಪ್ ಸೆಟ್ ಮೇಲೆಯೇ ಬಿದ್ದು ಮೃತಪಟ್ಟಿದ್ದಾರೆ.

ಮಳೆಗಾಲವಾದ್ದರಿಂದ ಪಂಪ್ ಸೆಟ್ ಮೋಟರ್ ಗ್ರೌಂಡಿಂಗ್ ಆಗಿದ್ದರಿಂದ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಹಲಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂದೆ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments