Thursday, September 19, 2024
Google search engine
Homeತಾಜಾ ಸುದ್ದಿಜೈಲಲ್ಲಿ ರಾಜಾತಿಥ್ಯ ಇದೇ ಮೊದಲಲ್ಲ: ಮಾಧ್ಯಮಗಳ ಮೇಲೆ ಸುಮಲತಾ ಗರಂ

ಜೈಲಲ್ಲಿ ರಾಜಾತಿಥ್ಯ ಇದೇ ಮೊದಲಲ್ಲ: ಮಾಧ್ಯಮಗಳ ಮೇಲೆ ಸುಮಲತಾ ಗರಂ

ಜೈಲಲ್ಲಿ ರಾಜಾತಿಥ್ಯ ದೊರೆಯುತ್ತಿರುವ ಪ್ರಕರಣ ಇದೇ ಮೊದಲಲ್ಲ. ದರ್ಶನ್ ವಿಷಯ ಇಷ್ಟೊಂದು ಹೈಲೆಟ್ ಮಾಡೋರು ಮೊದಲೆಲ್ಲ ಈ ಪ್ರಕರಣ ಬೆಳಕಿಗೆ ಬಂದಾಗ ಯಾಕೆ ಹೈಲೆಟ್ ಮಾಡಲಿಲ್ಲ ಎಂದು ಬಿಜೆಪಿ ನಾಯಕ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಲ್ಲಿ ಗಾಂಜಾ, ಮೊಬೈಲ್, ಸಿಗರೇಟು ಸಿಗುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗ ಯಾಕೆ ಮಾಧ್ಯಮಗಳು ಇಷ್ಟೊಂದು ಪ್ರಚಾರ ಕೊಡಲಿಲ್ಲ. ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಲಿಲ್ಲ ಎಂದು ಪ್ರಶ್ನಿಸಿದರು.

ಜೈಲಲ್ಲಿ ಗಾಂಜಾ, ಸಿಗರೇಟು ಸಿಗುವುದು ಇಲ್ಲಿ ಮಾತ್ರವಲ್ಲ, ಅಮೆರಿಕಾದಂತ ರಾಷ್ಟ್ರಗಳಲ್ಲೂ ಸಿಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು. ಅದು ಬಿಟ್ಟು ದರ್ಶನ್ ಒಬ್ಬನ ವಿಷಯ ಇಟ್ಟುಕೊಂಡು ವರದಿ ಮಾಡುವುದು ಅಲ್ಲ. ಜೈಲಲ್ಲಿ ದರ್ಶನ್ ಹೋದ ನಂತರ ಮಾತ್ರ ಇವೆಲ್ಲಾ ಸಿಗುತ್ತಿಲ್ಲ. ಮೊದಲಿನಿಂದಲೂ ಸಿಗುತ್ತಿವೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments