Friday, May 17, 2024
Google search engine
Homeತಾಜಾ ಸುದ್ದಿವಿಜಯಪುರ ಜಾತ್ರೆ ವೇಳೆ ರಥ ಉರುಳಿ ಇಬ್ಬರು ಭಕ್ತರ ಸಾವು

ವಿಜಯಪುರ ಜಾತ್ರೆ ವೇಳೆ ರಥ ಉರುಳಿ ಇಬ್ಬರು ಭಕ್ತರ ಸಾವು

ಉತ್ತರ ಕರ್ನಾಟಕ ಭಾಗದ ಖ್ಯಾತ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ  ರಥೋತ್ಸವದ ವೇಳೆ ರಥ ಉರುಳಿದ ಪರಿಣಾಮ ಇಬ್ಬರು ಭಕ್ತರು ಮೃತಪಟ್ಟ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಬಂಡು ಕಟಕದೊಂಡ (35) ಮತ್ತು ಶೋಭು ಮಹದೇವ ಶಿಂಧೆ (55) ಮೃತಪಟ್ಟ ದುರ್ದೈವಿಗಳು.

ಭಾನುವಾರ ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ವಲ್ಪ ದೂರ ರಥ ಎಳೆಯುವ ಹೊತ್ತಿಗೆ ಅದರ ಅಡಿ ಸಿಲುಕಿ ಬಂಡು ಕಟಕದೊಂಡ ತೀವ್ರವಾಗಿ ಗಾಯಗೊಂಡರೆ. ಶೋಭು ಮಹದೇವ ಸಿಂಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಅನಾಹುತದಿಂದ ನೂಕು ನುಗ್ಗಲು ಉಂಟಾಗಿದ್ದರಿಂದ ನರೇಂದ್ರ ಕಟಕದೊಂಡ ಎಂಬಾತ ಕೂಡ ರಥದ ಗಾಲಿಗೆ ಸಿಲುಕಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದ ಕಾರಣದಿಂದ ಕೂಡಲೇ ರಥವನ್ನು ನಿಲ್ಲಿಸಿ ಅನಾಹುತ ಆಗುವುದನ್ನು ತಪ್ಪಿಸಲಾಯಿತು. ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments