Thursday, September 19, 2024
Google search engine
Homeಜಿಲ್ಲಾ ಸುದ್ದಿಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ಪ್ರತಾಪ್ ಸಿಂಹ ಸ್ವಾಗತ: ಬಿಜೆಪಿ ಸಂಸದರಿಗೆ ಟಾಂಗ್

ಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ಪ್ರತಾಪ್ ಸಿಂಹ ಸ್ವಾಗತ: ಬಿಜೆಪಿ ಸಂಸದರಿಗೆ ಟಾಂಗ್

ಮೈಸೂರು ರಾಜ ಮನೆತನದ ವಿರೋಧದ ನಡುವೆ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ಅಗತ್ಯವಿದೆ ಎಂದರು.

ಬೆಟ್ಟದಲ್ಲಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಅಗತ್ಯವಿದೆ. ಇದಕ್ಕಾಗಿ ಪ್ರಾಧಿಕಾರ ರಚನೆ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನನ್ನದು ಸೈದ್ಧಾಂತಿಕ ವಿರೋಧ ಇದೆ. ಆದರೆ ಮೈಸೂರು ಅಭಿವೃದ್ಧಿ ಬಗ್ಗೆ ಬೆಂಬಲ ಇದೆ. ಪ್ರಾಧಿಕಾರ ಬೇಡ ಅನ್ನೋರು ಯಾಕೆ ಯಾವುದೇ ಅಭಿವೃದ್ಧಿ ಇದುವೆರಗೂ ಮಾಡಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments