Friday, June 5, 2026
Google search engine
Homeಕ್ರೀಡೆಭಾರತ ಟಿ-20 ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನೂತನ ನಾಯಕ: ಸೂರ್ಯಕುಮಾರ್‌ ಗೆ ಕೊಕ್

ಭಾರತ ಟಿ-20 ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನೂತನ ನಾಯಕ: ಸೂರ್ಯಕುಮಾರ್‌ ಗೆ ಕೊಕ್

ಭಾರತ ಟಿ-20 ತಂಡದ ನಾಯಕ ಸ್ಥಾನದಿಂದ ಸೂರ್ಯಕುಮಾರ್‌ ಅವರನ್ನು ಕೆಳಗಿಳಿಸಿ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರನ್‌ ಬರ ಎದುರಿಸುತ್ತಿರುವ ಸೂರ್ಯಕುಮಾರ್‌ ಅವರನ್ನು ಕೆಳಗಿಳಿಸಲು ತೀರ್ಮಾನಿಸಲಾಗಿದ್ದು, ಭರ್ಜರಿ ಫಾರ್ಮ್‌ ನಲ್ಲಿರುವ ಶ್ರೇಯಸ್‌ ಅಯ್ಯರ್‌ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ.

ಟಿ-20 ವಿಶ್ವಕಪ್‌ ಗೆದ್ದ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈಬಿಡಲಾಗಿದ್ದು, 2026ರ ವಿಶ್ವಕಪ್‌ ವರೆಗೂ ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಜೂನ್‌ 26ರಿಂದ 28ರವರೆಗೆ ನಡೆಯಲಿರುವ ಐರ್ಲೆಂಡ್‌ ವಿರುದ್ಧ ಟೂರ್ನಿಯ ಮೂಲಕ ಅಯ್ಯರ್‌ ನಾಯಕನಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಇದರ ಬೆನ್ನಲ್ಲೇ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments